ಬೆಂಗಳೂರು ಗ್ರಾಮಾಂತರ: ವಿದ್ಯುತ್ ಸರಿಪಡಿಸಲು ಟ್ರಾನ್ಸ್ಫಾರ್ಮರ್ ಹತ್ತಿದ್ದ ವ್ಯಕ್ತಿಗೆ ಏಕಾಏಕಿ ಕರೆಂಟ್ ಶಾಕ್ ಹೊಡೆದು ಕಂಬದಲ್ಲೇ ಸಾವನ್ನಪ್ಪಿರುವ ಘಟನೆ, ದೊಡ್ಡಬಳ್ಳಾಪುರದ ಕಂಗಳಾಪುರದಲ್ಲಿ ನಡೆದಿದೆ.
ರಂಗಪ್ಪ(42) ಮೃತ ದುರ್ದೈವಿಯಾಗಿದ್ದಾರೆ. ಸಂಜೆ ಗ್ರಾಮದಲ್ಲಿ ವಿದ್ಯುತ್ ಕಡಿತ ಆಗಿತ್ತು. ಅದನ್ನ ರಿಪೇರಿ ಮಾಡಲು ರಂಗಪ್ಪ ಟ್ರಾನ್ಸ್ ಫಾರ್ಮರ್ ಹತ್ತಿದ್ದರು. ಇದೇ ವೇಳೆ ಟ್ರಾನ್ಸ್ ಫಾರ್ಮರ್ ಮೇಲೆ ಇದ್ದ ವಿದ್ಯುತ್ ತಂತಿ ತಗುಲಿ ಶಾಕ್ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.