ಕುಂದಾಪುರ: ಬೈಂದೂರು ಮಹಾತ್ಮ ಜ್ಯೋತಿಬಾ ಫುಲೆ ಕೊರಗರ ಯುವ ಕಲಾ ವೇದಿಕೆ ವತಿಯಿಂದ ಭೂಮಿ ಸಮಸ್ಯೆ ಬಗೆಹರಿಸಬೇಕೆಂದು ಪ್ರತಿಭಟನೆ ನಡೆಸಲಾಯಿತು.
ಬೈಂದೂರು ತಾಲೂಕು ಆಡಳಿತ ಕಚೇರಿಯ ಎದುರು ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ತಮ್ಮ ಸಮಸ್ಯೆಯನ್ನು ಬಗೆಹರಿಸಬೇಕೆಂದು ಪ್ರತಿಭಟನೆ ನಡೆಸಿದರು. ಅಲ್ಲದೇ, ಮನವಿ ಅರ್ಪಿಸಿದರು. ಡೊಳ್ಳು ಬಾರಿಸುವುದರ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು. ಮಹಿಳೆಯರು, ಪುರುಷರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಗಿರಿಜನ ಸಮನ್ವಯ ಅಧಿಕಾರಿ ನಾರಾಯಣ ಸ್ವಾಮಿ, ಸಮಾಜ ಕಲ್ಯಾಣ ಅಧಿಕಾರಿ ರಮೇಶ್ ಕುಲಾಲ್ ಅವರಿಗೆ ಮನವಿ ಅರ್ಪಿಸಲಾಯಿತು.
ತಾಲೂಕಿನ ಕೊರಗ ಸಂಘಟನೆ ಅಧ್ಯಕ್ಷ ಗಣೇಶ್ ಕುಂದಾಪುರ ಮಾತನಾಡಿ, ಬೈಂದೂರು ತಾಲೂಕಿನ ಕೊರಗ ಸಮುದಾಯದ ಹಲವು ಕುಟುಂಬಗಳಿಗೆ ಭೂಮಿ ಇಲ್ಲ. ಈ ಮೊದಲು ಅನೇಕ ಬಾರಿ ಕೊರಗರಿಗೆ ಭೂಮಿಯನ್ನು ನೀಡುವ ಕುರಿತು ಸಭೆಗಳು, ಚರ್ಚೆಗಳು ನಡೆದಿವೆ. ಇಲ್ಲಿಯವರೆಗೂ ಕೂಡ ಭೂಮಿ ನೀಡಿಲ್ಲ. ಹೀಗಾಗಿ ಕೊರಗ ಸಮುದಾಯದವರಿಗೆ ಕೃಷಿ ಚಟುವಟಿಕೆಗೆ ಯೋಗ್ಯವಾದ ಭೂಮಿ ನೀಡಬೇಕು. ಕೆಳಗಿನ ನಿರ್ದಿಷ್ಟ ಸಮಸ್ಯೆಗೆ ಶೀಘ್ರವೇ ಸ್ಪಂದಿಸಿ ಭೂಮಿ ಸಮಸ್ಯೆಯನ್ನು ಸರಿಪಡಿಸಿ ಕೊಡುವುದರೊಂದಿಗೆ ಕೊರಗರ ಅಭಿವೃದ್ಧಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಕೂಡಲೇ ತಹಸೀಲ್ದಾರ್ ಅವರ ಅಧ್ಯಕ್ಷತೆ ಹಾಗೂ ಎಸಿ ಅವರ ಉಪಸ್ಥಿತಿಯಲ್ಲಿ ಕೊರಗರ ಭೂಮಿ ಸಮಸ್ಯೆ ಬಗ್ಗೆ ತುರ್ತು ಸಭೆ ಕರೆದು ಮಾತನಾಡಿದರು.
ಗಿರಿಜನ ಸಮನ್ವಯ ಅಧಿಕಾರಿ ನಾರಾಯಣ ಸ್ವಾಮಿ, ಸಮಾಜ ಕಲ್ಯಾಣ ಅಧಿಕಾರಿ ರಮೇಶ್ ಕುಲಾಲ್ ಅವರಿಗೆ ಮನವಿ ಅರ್ಪಿಸಲಾಯಿತು.
ವೈ. ಲಕ್ಷ್ಮಣ, ಸಿಐಟಿಯು ಸುರೇಶ್ ಕಲ್ಗಾರ್, ರಾಜು ಪಡುಕೋಣೆ, ಗಣೇಶ್ ಬಾರ್ಕೂರು, ಸುರೇಶ್ ಎಳಜಿತ್, ಸುಬ್ರಹ್ಮಣ್ಯ ಬಿಜೂರ್, ಗಣೇಶ್ ಪೂಜಾರಿ, ಸೂರಸಿದ್ದ ಹೇರೂರು ಸೇರಿದಂತೆ ಹಲವರು ಇದ್ದರು.