ಮುಂಗಾರು ಪೂರ್ವ ಒಂದೇ ಮಳೆಗೆ ಬೆಂಗಳೂರು ತತ್ತರಿಸಿದ್ದಕ್ಕೆ ಬಿಬಿಎಂಪಿ ವಿರುದ್ಧ ಲೋಕಾಯುಕ್ತ ಗರಂ ಆಗಿದೆ.

ನಿನ್ನೆ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿರುವ ಲೋಕಾಯುಕ್ತ ತಂಡ ಪರಿಸ್ಥಿತಿ ಅವಲೋಕಿಸಿದೆ. ಲೋಕಾಯುಕ್ತ ಬಿ.ಎಸ್. ಪಾಟೀಲ್, ಉಪಲೋಕಾಯುಕ್ತ ವೀರಪ್ಪ ಹಾಗೂ ಫಣೀಂದ್ರ ಭೇಟಿ ನೀಡಿ ಪೂರ್ವ ಸಿದ್ಧತೆ ಮಾಡಿಕೊಳ್ಳದ ಬಗ್ಗೆ ಗರಂ ಆಗಿದ್ದಾರೆ.
ಒತ್ತುವರಿ ತೆರವು ಮಾಡದ ಬಗ್ಗೆಯೂ ಪಾಲಿಕೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿ ಅಗತ್ಯ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತರು ಪಾಲಿಕೆಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳನ್ನು ಕರೆಯಿಸಿ ಲೋಕಾಯುಕ್ತ ಅಧಿಕಾರಿಗಳು ಸಭೆ ನಡೆಸಿದ್ದಾರೆ.
ಅಲ್ಲದೇ, ಬಿಬಿಎಂಪಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ಮಳೆಗೆ ಸಿದ್ಧತೆ ಇಲ್ಲದೆ ನಿರ್ಲಕ್ಷ್ಯ ವಹಿಸಿದ್ದಕ್ಕೆ ದೂರು ದಾಖಲು ಮಾಡಿಕೊಳ್ಳಲಾಗಿದೆ. ಈ ದೂರು ದಾಖಲಿಸಿಕೊಂಡು ಲೋಕಾಯುಕ್ತ ವಿಚಾರಣೆ ನಡೆಸುತ್ತಿದೆ.
ಮಳೆಗಾಲಕ್ಕೆ ತೆಗೆದುಕೊಂಡ ಸಿದ್ಧತೆಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಕೇಳಲಾಗಿದೆ. ಲೋಕಾಯುಕ್ತ ಕೋರ್ಟ್ ಗೆ ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್ ಹಾಜರಾಗಿದ್ದರು. ಅಲ್ಲದೇ, EIC ಪ್ರಹ್ಲಾದ್ ಸೇರಿದಂತೆ ಪಾಲಿಕೆಯ ಹಿರಿಯ ಅಧಿಕಾರಿಗಳು ಕೂಡ ಹಾಜರಾಗಿದ್ದರು.
ಬಿಬಿಎಂಪಿಯ ಎಂಟು ವಲಯಗಳ ಮೇಲೂ ಪ್ರತ್ಯೇಕ ಕೇಸ್ ದಾಖಲಾಗಿವೆ. ರಾಜ ಕಾಲುವೆಯಿಂದ ನೀರು ಉಕ್ಕಿ ಹರಿದಿರುವುದು. ಕಸವಿಲೇವಾರಿ ಸರಿಯಾಗಿ ಮಾಡದೆ ಇರುವುದು. ಕೆರೆ, ರಾಜಕಾಲುವೆ ಒತ್ತುವರಿ ತೆರವು ಮಾಡದಿರುವುದರ ಕುರಿತು ದೂರು ದಾಖಲಾಗಿವೆ. BWSSB, BMRCL ಸಂಸ್ಥೆಗಳನ್ನೂ ಲೋಕಾಯುಕ್ತ ಪಾರ್ಟಿ ಮಾಡಿದೆ.
ಈ ವೇಳೆ ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತ ಛೀಮಾರಿ ಹಾಕಿದೆ. ಜನರ ತೆರಿಗೆ ದುಡ್ಡಿನಿಂದ ಸಂಬಳ ತೆಗೆದುಕೊಳ್ಳುತ್ತೀರಿ. ಕೆಲಸ ಮಾಡಬೇಕು ತಾನೆ? ಸುಮ್ಮನೆ ಕಾಲ ಕಳೆಯುವುದಲ್ಲ. ಪ್ರತಿ ವರ್ಷ ಇದೇ ಪರಿಸ್ಥಿತಿ ಇದೆ. ಹೀಗೆ ಆದರೆ ಹೇಗೆ? ಯಾರು ಹೇಳುವವರು, ಕೇಳುವವರು ಇಲ್ವಾ? ಎಂದು ಲೋಕಾಯುಕ್ತ ಛೀಮಾರಿ ಹಾಕಿದೆ.