ಬೆಂಗಳೂರು: ಇಡೀ ವಿಶ್ವಕ್ಕೆ ಸೇವೆ ಸಲ್ಲಿಸುವವ ಕಾರ್ಮಿಕ ದಿನಾಚರಣೆ ಇಂದು. ಕಾರ್ಮಿಕ, ಕೃಷಿಕ, ಶಿಕ್ಷಕ, ಸೈನಿಕ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು. ಪೌರ ಕಾರ್ಮಿಕರು ಸ್ವಚ್ಚತಾ ರಾಯಭಾರಿಗಳು. ಸ್ವಚ್ಚತೆ ಕಾಪಾಡಿ ಬೆಂಗಳೂರಿಗೆ ವಿಶ್ವ ಮಾನ್ಯತೆ ಕೊಡುತ್ತಿರುವವರು ನೀವು. ನಾವು ವಿರೋಧ ಪಕ್ಷದಲ್ಲಿ ಇದ್ದಾಗ ಮಾತು ಕೊಟ್ಟಿದ್ದೇವು. ಈಗ ಅದಕ್ಕೆ ಹೊಸ ರೂಪ ಕೊಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆದ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಮಾತಿಗೆ ಬದ್ಧರಾಗಿ ನಾವು ನಡೆದುಕೊಂಡಿದ್ದೇವೆ. ಈಗ ಅದಕ್ಕೆ ಹೊಸ ರೂಪ ಕೊಡುತ್ತಿದ್ದೇವೆ. ಮಲ್ಲಿಕಾರ್ಜನ್ ಖರ್ಗೆ ಅವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅವರ ಕಾರ್ಯಗಳು ಇತಿಹಾಸ ಪುಟ ಸೇರುತ್ತವೆ ಎಂದಿದ್ದಾರೆ.
ಪೌರ ಕಾರ್ಮಿಕರ ಮಕ್ಕಳು ಮಕ್ಕಳು ಕೂಡ ಐಎಎಸ್, ಐಪಿಎಸ್, ಮಂತ್ರಿಗಳಾಗಬೇಕು ಎಂಬುವುದು ನಮ್ಮ ಸರ್ಕಾರದ ಉದ್ಧೇಶ. ಕುವೆಂಪು ಅವರು ಪೌರಕಾರ್ಮಿಕರನ್ನು ಶಿವನಿಗೆ ಹೋಲಿಸಿದ್ದಾರೆ. ಬೀದಿ ಗುಡಿಸುವ ಕಾರ್ಮಿಕರಲ್ಲಿ ನಾನಿದ್ದೀನೆ. ಉಳುಮೆ ಮಾಡುವ ಒಕ್ಕಲಿಗರಲ್ಲಿ ನಾವಿದ್ದೇವೆ ಅಂದಿದ್ದರು. ಇಂದು ನೀವು ಸರ್ಕಾರದ ಕಾರ್ಮಿಕರಾಗಿ ನೇಮಕ ಆಗಿದ್ದೀರಿ. ಇವತ್ತು ಸೋನಿಯಾಗಾಂಧಿಯವರಿದ್ದ ಜಾಗದಲ್ಲಿ ನಮ್ಮ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ಕಾರ್ಮಿಕ ಸಚಿವರಾಗಿ ಅವರು ಮಾಡಿದ ಕೆಲಸ ಬಹು ದೊಡ್ಡದು.
ಕಾರ್ಮಿಕರಿಗಾಗಿ ಹಲವು ಕೆಲಸ ಮಾಡಿ ಇತಿಹಾಸದ ಪುಟ ಸೇರಿದ್ದಾರೆ. ಹೀಗಾಗಿಯೇ ಇವತ್ತು ಅವರ ಕೈಯಿಂದಲೇ ಜ್ಯೋತಿ ಬೆಳಗಿಸುವ ಕಾರ್ಯ ಮಾಡುತ್ತಿದ್ದೇವೆ ಎಂದಿದ್ದಾರೆ.
ಪೌರ ಕಾರ್ಮಿಕರಿಗಾಗಿ 600 ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದೇವೆ. ಒಂದು ರೂಪಾಯಿ ಲಂಚ ಇಲ್ಲದೇ ನಿಮ್ಮನ್ನು ನೇಮಕ ಮಾಡಿದ್ದೀವೆ. ನ್ಯಾಯ ಒದಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ನಮ್ಮ ಹಿರಿಯರಾದ ಬಸವಲಿಂಗಪ್ಪ, ಸಾಲಪ್ಪರನ್ನ ನೆನೆಯಬೇಕು ಎಂದಿದ್ದಾರೆ.
ಐಪಿಡಿ ಸಾಲಪ್ಪ ವರದಿ ಜಾರಿಗೆ ಹಂತ ಹಂತವಾಗಿ ಪ್ರಯತ್ನ ಮಾಡುತ್ತಿದ್ದೇವೆ. ನಿಮ್ಮ ಮಕ್ಕಳ ಭವಿಷ್ಯಕ್ಕೆ ಹಲವು ಕಾರ್ಯಕ್ರಮ ರೂಪಿಸಿದ್ದೇವೆ. ಅದಕ್ಕಾಗಿ 700 ಕೋಟಿ ರೂ. ಮೀಸಲಿಟ್ಟಿದ್ದೇವೆ. ನಿವೃತಿಯಾದ ತಕ್ಷಣ 10 ಲಕ್ಷ ರೂ. ಡೆಪಾಸಿಟ್, 6 ಸಾವಿರ ರೂ. ಪಿಂಚಣಿ ನೀಡುವ ಕಾರ್ಯಕ್ರಮ ರೂಪಿಸಿದ್ದೇವೆ ಎಂದಿದ್ದಾರೆ.
AICC ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೆವಾಲ, ಸಚಿವರಾದ ರಾಮಲಿಂಗ ರೆಡ್ಡಿ, ಹೆಚ್.ಸಿ. ಮಹದೇವಪ್ಪ, ಭೈರತಿ ಸುರೇಶ್, ರಹೀಂ ಖಾನ್, ಶಾಸಕರಾದ ಎಸ್.ಟಿ. ಸೋಮಶೇಖರ್, ರಿಜ್ವಾನ್ ಅರ್ಷದ್ ಸೇರಿದಂತೆ ಹಲವರು ಭಾಗಿಯಾಗಿದ್ದರು.