ಶಿವಮೊಗ್ಗ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಶಿವಮೊಗ್ಗದ ನಿವಾಸಿ ಮುಂಜುನಾಥ್ ಅವರ ಮನೆಗೆ ಹಿಂದೂ ಹೋರಾಟಗಾರ ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಜುನಾಥ್ ಮನೆಗೆ ನಿನ್ನೆ ಭೇಟಿ ನೀಡಿದ್ದೆ, ಅವರ ತಾಯಿ ಮಗ ಹಾಗೂ ಹೆಂಡತಿ ಧೈರ್ಯವನ್ನು ನೋಡಿದರೆ ಹೆಮ್ಮೆಯಾಗುತ್ತದೆ. ಅವರಿಗೆ ನಾವು ಸಾಂತ್ವನ ಮಾತ್ರ ಕೊಡಲು ಸಾಧ್ಯ. ನಮಗೆ ಸಾಂತ್ವನ ಬೇಕಾಗಿಲ್ಲ. ಪ್ರತೀಕಾರ ಬೇಕಾಗಿದೆ. ಪ್ರತೀಕಾರ ಒಂದೇ ಈ ಲಾಜಿಕಲ್ ಎಂಡ್ ಮಾಡಲು ಸಾಧ್ಯವಾಗುತ್ತದೆ ಎಂದು ಕುಟುಂಬದವರು ಹೇಳಿದ್ದಾರೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಯುದ್ಧ ಬೇಡ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ ಅಲ್ಲ. ನಾನು ಅವರನ್ನು ನನ್ನ ಸಿಎಂ ಎಂದು ಒಪ್ಪಿಕೊಳ್ಳುವುದಿಲ್ಲ. ನರೇಂದ್ರ ಮೋದಿ ಸಾಮಾನ್ಯ ಮನುಷ್ಯ ಅಲ್ಲ ಅಂತ ಪಾಕಿಸ್ತಾನಕ್ಕೆ ಗೊತ್ತಾಗಿದೆ. ಅದೇ ರೀತಿ ಕಾಂಗ್ರೆಸ್ ಗೂ ಕೂಡ ಅರ್ಥ ಆಗಿದೆ. ಸಿದ್ದರಾಮಯ್ಯ, ತಿಮ್ಮಾಪುರ ಅಂತವರು ಪಾಕಿಸ್ತಾನದ ರಕ್ಷಣೆಗೆ ನಿಂತಿದ್ದಾರೆ. ನಿಮ್ಮ ತಾಕತ್ತು ನೀವು ತೋರಿಸಿ ನಮ್ಮ ತಾಕತ್ತು ನಾವು ತೋರಿಸುತ್ತೆವೆ. ನನಗಂತೂ ಯುದ್ಧ ಬೇಕೇ ಬೇಕು. ಅವರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.