ಧಾರವಾಡ : ಜಾಗದ ವಿವಾದದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ಮಧ್ಯೆ ಹೊಡೆದಾಟ ನಡೆದಿರುವ ಘಟನೆ ನಡೆದಿದೆ.
ನವಲಗುಂದ ತಾಲ್ಲೂಕಿನ ಶಲವಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಜುನಾಥ ಜೈನರ್ ಮನೆ ಮೇಲೆ ಕಲ್ಲು, ಇಟ್ಟಿಗೆಯಿಂದ ಶ್ರೀನಿವಾಸ ಮರಡ್ಡಿ ಎಂಬುವವರ ಕುಟುಂಬ ದಾಳಿ ನಡೆಸಿದೆ. ಮನೆಯ ಕಿಟಕಿ, ಗಾಜುಗಳನ್ನು ಮರಡ್ಡಿ ಕುಟುಂಬದವರು ಒಡೆದಿದ್ದಾರೆ ಎನ್ನಲಾಗಿದೆ.
ದಾಳಿಯ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಜಾಗದ ವಿಷಯಕ್ಕೆ ಎರಡೂ ಕುಟುಂಬಗಳ ನಡುವೆ ಜಗಳವಿದ್ದು, ಹಲವಾರು ಬಾರಿ ಜಗಳ ನಡಡೆದಿದೆ. ಈ ಜಗಳ ವಿಕೋಪಕ್ಕೆ ತೆರಳಿ ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಏಕಾಏಕಿ ಮಂಜುನಾಥ ಮನೆ ಮೇಲೆ ದಾಳಿ ಮಾಡಿ, ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಎರಡೂ ಕುಟುಂಬಸ್ಥರು ಪರಸ್ಪರ ದೂರು ದಾಖಲಿಸಿದ್ದಾರೆ.
ಕೇಸ್ ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಜೈನರ ಕುಟುಂಬ ಆರೋಪ ಮಾಡಿದೆ.