ಮಂಡ್ಯ : ಕುಮಾರಸ್ವಾಮಿ ಕೊಡುಗೆ ಶೂನ್ಯ ಎಂದವರಿಗೆ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಮಂಡ್ಯ ಜಿಲ್ಲೆಯಲ್ಲಿ 6 ಜನ ಕೈ ಶಾಸಕರಿದ್ದಾರೆ. ಜಿಲ್ಲೆಗೆ ಅವರ ಕೊಡಗೆ ಏನು? ಎಂಬುವುದನ್ನು ಮೊದಲು ಸ್ಪಷ್ಟಪಡಿಸಲಿ. ಜಿಲ್ಲಾ ಉಸ್ತುವಾರಿ ಸಚಿವರು ಹಿರಿಯರಿದ್ದಾರೆ, ಅವರ ಕೊಡುಗೆ ಏನು? ಎಂದು ಜನ ಕೇಳುತ್ತಿದ್ದಾರೆ. ಈ ಕುರಿತು ಮೊದಲು ಜನರಿಗೆ ಅವರು ಹೇಳಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದ ಮಾವು ಮತ್ತು ತಂಬಾಕು ಬೆಳಗಾರರ ಸಂಕಷ್ಟಕ್ಕೆ ಸ್ಪಂದಿಸಿದ್ದು ಕೇಂದ್ರದ ಕುಮಾರಣ್ಣ ಹೊರತು ರಾಜ್ಯದ ಕೃಷಿ ಸಚಿವರಲ್ಲ. ಕುಮಾರಸ್ವಾಮಿ ಅವರು ಕೇಂದ್ರದ ಕೃಷಿ ಸಚಿವರಲ್ಲದಿದ್ದರೂ ಸ್ಪಂದಿಸಿದ್ದಾರೆ. ಅದು ಅವರ ರೈತಪರ ಕಾಳಜಿ. ಅಲ್ಲದೇ, ಮೈಷುಗರ್ ಶಾಲೆಗೆ 25 ಕೋಟಿ ರೂ. CSR ಫಂಡ್ ಬಿಡುಗಡೆ ಮಾಡಿದ್ದಾರೆ. ಆದರೆ, ಕೃಷಿ ಸಚಿವರು ಕೃಷಿ ವಿವಿ ಮಾಡ್ತೀನಿ ಅಂತಾ ಹೊರಟು ಅದಕ್ಕೆ ಇನ್ನು ಅನುದಾನ ಬಿಡುಗಡೆ ಮಾಡಿಸಿಲ್ಲ ಎಂದು ಕಿಡಿಕಾರಿದ್ದಾರೆ.