ಶ್ರೀ ಕ್ಷೇತ್ರ ಧರ್ಮಸ್ಥಳ ಕಿರಿಮಂಜೇಶ್ವರ ವಲಯದ ಕಂಬದ ಕೋಣೆ ಶೌರ್ಯ ವಿಪತ್ತು ಘಟಕದ ಸದಸ್ಯರು ಕಿರಿಮಂಜೇಶ್ವರ ಅಗಸ್ತ್ಯೇಶ್ವರ ದೇವಸ್ಥಾನದ ಪವಿತ್ರ ತೀರ್ಥಕೆರೆಯ ಸ್ವಚ್ಛತೆ ಕಾರ್ಯ ನಡೆಸಿದ್ದಾರೆ.

ಬೆಳಿಗ್ಗೆಯಿಂದ ಸಂಜೆಯವರೆಗೆ ನಿಸ್ವಾರ್ಥ ಸೇವೆ ನಡೆಸಿದ್ದಾರೆ. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಕಿರಿಮಂಜೇಶ್ವರ ವಲಯದ ಕಂಬದ ಕೋಣೆ ಶೌರ್ಯ ವಿಪತ್ತು ಘಟಕದ ಸದಸ್ಯರು ಒಂದು ಉತ್ತಮ ಕಾರ್ಯವನ್ನು ನಿರ್ವಹಿಸಿದರು. ಕೆರೆ ನೀರು ಕೃಷಿ ಜಮೀನಿನ ತೇವಾಂಶ ಉಳಿಸುತ್ತ ಬಂದಿದೆ. ಇಂತಹ ಅಂಶಗಳು ಇಂದಿನ ಯುವ ಪೀಳಿಗೆಗೆ ಅರಿವಾಗಬೇಕು. ಒಮ್ಮೆ ಸ್ವಚ್ಛಗೊಳಿಸಿದ ಕೆರೆಯಲ್ಲಿ ಜನರು ಕಸ ಚೆಲ್ಲದಂತೆ ಜಾಗೃತಿ ವಹಿಸಬೇಕು. ಪರಿಸರ ಪ್ರೀತಿಸುವ ಜತೆಗೆ ಕೆರೆ ಗೌರವಿಸುವ ಕಾರ್ಯ ತುರ್ತಾಗಿ ನಡೆಯಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಮಾಜಿ ವಲಯಾಧ್ಯಕ್ಷ ದಿನೇಶ್ ಅಚಾರ್, ರತ್ನಾಕರ್ ಕೊಡೇರಿ ಸೇರಿದಂತೆ ಹಲವರು ಇದ್ದರು.