ದೇಶೀಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡರು ಉತ್ತರಪ್ರದೇಶ ವಿರುದ್ಧ ಡ್ರಾ ಸಾಧಿಸಿ, ಮೂರು ಅಂಕ ಪಡೆದಿದೆ.
ಮೊದಲ ಇನಿಂಗ್ಸ್ನಲ್ಲಿ ಉತ್ತಮ ಮುನ್ನಡೆ ಪಡೆದ ಕರ್ನಾಟಕ ಎರಡನೇ ಇನಿಂಗ್ಸ್ನಲ್ಲಿ ಎಡವಿದ್ದರಿಂದಾಗಿ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಹೀಗಾಗಿ ಕರ್ನಾಟಕಕ್ಕೆ ಮೂರು ಅಂಕ ಲಭಿಸಿವೆ. ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಉತ್ತರಪ್ರದೇಶವು 261 ರನ್ ಗಳ ಗೆಲುವಿನ ಗುರಿ ನೀಡಿತ್ತು.
ಕೊನೆಯ ದಿನದ ಎರಡನೇ ಸೆಷನ್ ನಲ್ಲಿ ಬ್ಯಾಟಿಂಗ್ ಗೆ ಇಳಿದ ಕರ್ನಾಟಕ ತಂಡಕ್ಕೆ ಗೆಲ್ಲುವ ಅವಕಾಶವೂ ಇತ್ತು. ಆದರೆ, ಆರಂಭಿಕ ಹೋರಾಟದ ಹೊರತಾಗಿ, ನಂತರ ಬಂದ ಟಾಪ್ ಬ್ಯಾಟ್ಸಮನ್ ಗಳು ಸಮರ್ಪಕವಾಗಿ ಆಡಲು ವಿಫಲರಾದ ಹಿನ್ನೆಲೆಯಲ್ಲಿ ತಂಡ ಡ್ರಾ ಮಾಡಿಕೊಂಡಿತು.
ನಿಕಿನ್ ಜೋಸ್ (48; 84ಎ) ಮತ್ತು ಮಯಂಕ್ ಅಗರವಾಲ್ (37; 46ಎ) ಉತ್ತಮ ಆರಂಭ ನೀಡಿದರು. ಆದರೆ ದೀರ್ಘ ಇನಿಂಗ್ಸ್ ಆಡುವಲ್ಲಿ ಯಶಸ್ವಿಯಾಗಲಿಲ್ಲ. ಸ್ಮರಣ್ ಆರ್ ಮತ್ತು ಮೊದಲ ಇನಿಂಗ್ಸ್ನಲ್ಲಿ ಶತಕ ಗಳಿಸಿದ್ದ ಕೃಷ್ಣನ್ ಶ್ರೀಜಿತ್ ಕೂಡ ಬೇಗನೆ ಔಟ್ ಆದರು. ಮನೀಷ್ ಪಾಂಡೆ (ಔಟಾಗದೆ 36; 78ಎ) ಮತ್ತು ಅಭಿನವ್ ಮನೋಹರ್ (ಔಟಾಗದೆ 31; 72ಎ) ಗಳಿಸಿ, ತಂಡವನ್ನು ಡ್ರಾ ಮಾಡಿಕೊಂಡರು.
ಈ ಪಂದ್ಯ ಡ್ರಾ ಆದ ಹಿನ್ನೆಲೆಯಲ್ಲ ಕರ್ನಾಟಕಕ್ಕೆ ನಾಕೌಟ್ ಹಾದಿ ಕಷ್ಟವಾಗಿದೆ. ಕರ್ನಾಟಕದ ಮೊದಲೆರಡು ಪಂದ್ಯಗಳು ಮಳೆಗೆ ಆಹುತಿಯಾಗಿದ್ದವು. ಮೂರನೇ ಪಂದ್ಯದಲ್ಲಿ ಬಿಹಾರ ವಿರುದ್ಧ ಗೆದ್ದಿತ್ತು. ಬಂಗಾಳ ವಿರುದ್ಧ ಡ್ರಾ ಮಾಡಿಕೊಂಡು 1 ಅಂಕ ಪಡೆದಿತ್ತು. ಈಗ ಮತ್ತೆ ಡ್ರಾ ಮಾಡಿಕೊಂಡು 3 ಅಂಕ ಪಡೆದುಕೊಂಡಿದೆ. ಹೀಗಾಗಿ ನಾಕೌಟ್ ಹಾದಿ ಕಠಿಣವಾಗಿದೆ.