ಬೆಂಗಳೂರು: ಟ್ರಾಫಿಕ್ ಪೊಲೀಸರ ಜೊತೆ ಕಿರಿಕ್ ಮಾಡಿದ ಜೆಡಿಎಸ್ ಯುವ ನಾಯಕನನ್ನು ಕಂಬಿ ಹಿಂದೆ ಕಳುಹಿಸಿರುವ ಘಟನೆ ನಡೆದಿದೆ.
ಹೆಲ್ಮೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರೊಂದಿಗೆ ಕಿರಿಕ್ ಮಾಡಿದ್ದ ನವೀನ್ ಗೌಡ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ‘ನಾನು ಹೆಲ್ಮೆಟ್ ಹಾಕುವುದಿಲ್ಲ. ಅದನ್ನು ಕೇಳಲು ನೀವ್ಯಾರು? ಇಲ್ಲಿ ಫೈನ್ ಹಾಕೋಕೆ ಪರ್ಮಿಷನ್ ಕೊಟ್ಟವರಾರು?’ ಎಂದು ಟ್ರಾಫಿಕ್ ಪೊಲೀಸರ ಜೊತೆ ಉದ್ಧಟತನ ಮೆರೆದಿದ್ದಾನೆ ಎನ್ನಲಾಗಿದೆ. ‘ನಾನು ಯಶವಂತಪುರ ಜೆಡಿಎಸ್ ಘಟಕದ ಅಧ್ಯಕ್ಷ. ಬೇಕು ಅಂತಲೇ ನಾನು ಹೆಲ್ಮೆಟ್ ಹಾಕದೆ ಬಂದಿದ್ದೇನೆ. ಇನ್ಸ್ ಪೆಕ್ಟರ್ಗೆ ಇಲ್ಲಿ ಗಾಡಿ ಹಿಡಿಯಬಾರದು ಅಂತಾ ಅವತ್ತೇ ಹೇಳಿದ್ದೀನಿ’ ಎಂದೆಲ್ಲ ಉದ್ಧಟತನ ಮೆರೆದಿದ್ದಾನೆ ಎನಲಾಗಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.