ಕೋಲಾರ: ಜೆಸಿಬಿಯಿಂದಲೇ ರೈತರೊಬ್ಬರನ್ನು ಪಕ್ಕಕ್ಕೆ ತಳ್ಳಿದ ವಿಡಿಯೋವೊಂದು ವೈರಲ್ ಆಗಿದೆ.
ಈ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ನಡೆದಿದೆ. ಜಮೀನು ವಿವಾದದ ಇರುವ ಹಿನ್ನೆಲೆಯಲ್ಲಿ ಬೋರ್ ವೆಲ್ ಪೈಪ್ ಅಳವಡಿಸುವ ಸಂದರ್ಭದಲ್ಲಿ ರಾಮಸಾಗರ ಗ್ರಾಮದ ನಾಗರಾಜ್ ಹಾಗೂ ಮಹೇಶ್ ಎಂಬುವವರ ಮಧ್ಯೆ ಜಗಳ ನಡೆದಿತ್ತು.
ನಾಗರಾಜ್ ಜಮೀನಿಗೆ ಪೈಪ್ ಅಳವಡಿಕೆಗೆ ಜೆಸಿಬಿ ಮೂಲಕ ನೆಲ ಅಗೆಸುತ್ತಿದ್ದಾಗ ಮಹೇಶ್ ಅಡ್ಡಿ ಮಾಡಿದ್ದರು. ಈ ವೇಳೆ ಮಹೇಶ್ ರನ್ನ, ಜೆಸಿಬಿಯಿಂದಲೇ ಜೆಸಿಬಿ ಚಾಲಕ ಪ್ರಸಾದ್ ರೆಡ್ಡಿ ಪಕ್ಕಕ್ಕೆ ಸರಿಸಿದ್ದಾರೆ. ಮಹೇಶ್ ತಲೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಬೇತಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗಾಯಾಳು ರೈತ ಮಹೇಶ್ ಕೆಜಿಎಫ್ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.