ನಿಜಕ್ಕೂ ನಾನು ಬದುಕಿ ಬಂದದ್ದೇ ದೊಡ್ಡ ಪವಾಡ. ನಾನು ಹೇಗೆ ಈ ದುರಂತದಲ್ಲಿ ಜೀವಂತವಾಗಿ ಉಳಿದೆ ಅನ್ನೋದು ನನಗೇ ಅರಿವಿಲ್ಲ. ವಿಮಾನ ಟೇಕ್ ಆಫ್ ಆಗಿ 30 ರಿಂದ 40 ಸೆಕೆಂಡ್ ನಲ್ಲೇ ಎಲ್ಲವೂ ಮುಗಿದು ಹೋಗಿತ್ತು ಅಂತಾ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ರಮೇಶ್ ಹೇಳಿದ್ದಾರೆ.
ಆರಂಭದಲ್ಲೇ ವಿಮಾನ ಟೇಕ್ ಆಫ್ ಆಗಲು ಹರಸಾಹಸ ಪಡುತ್ತಿತ್ತು. ಪೈಲೆಟ್, ವಿಮಾನದ ವೇಗ ಹೆಚ್ಚಿಸೋಕೆ ಇನ್ನಿಲ್ಲದ ಯತ್ನ ಮಾಡುತ್ತಿದ್ದರು. ಆದರೆ, ಅದ್ಯಾಕೋ ಪೈಲೆಟ್ ಪ್ರಯತ್ನ ಯಶಸ್ಸು ಕಾಣಲೇ ಇಲ್ಲ. ವಿಮಾನ ಜೋರಾಗೆ ನೆಲಕ್ಕೆ ಅಪ್ಪಳಿಸಿ ಬಿಟ್ಟಿತು. ಅಲ್ಲಿಂದ ಮುಂದೆ ಏನಾಯ್ತು ಅಂತಾ ನನ್ನ ಅರಿಗೆ ಬಂದಿಲ್ಲ. ನಾನು ಕಣ್ಬಿಟ್ಟಾಗ ನೆಲದ ಮೇಲೆ ಬಿದ್ದಿದೆ. ವಿಮಾನದ ಸೀಟಿನ ಬೆಲ್ಟ್ ನನ್ನ ಸುತ್ತುವರಿದಿತ್ತು. ಅದನ್ನು ಬಿಡಿಸಿಕೊಂಡು ಸ್ಕೊಂಡು ನಾನು ಓಡೋಡಿ ಬಂದೆ.
ನನ್ನ ಪಕ್ಕದಲ್ಲೇ ಗಗನ ಸಖಿ ಮತ್ತು ವಯಸ್ಸಾದ ಇಬ್ಬರ ಶವಗಳು ಬಿದ್ದಿದ್ವು ಅಂತಾ ವಿಶ್ವಾಸ್ ಘೋರ ದುರಂತವನ್ನು ವಿವರಿಸಿದ್ದಾರೆ. ವಿಮಾನ ನೆಲಕ್ಕಪ್ಪಳಿಸುತ್ತಿದ್ದಂತೆ ನನ್ನ ಪಕ್ಕದಲ್ಲೇ ಇದ್ದ ಗಗನ ಸಖಿ, ವೃದ್ಧ ದಂಪತಿ ಬೆಂಕಿಯಲ್ಲಿ ಬೆಂದು ಹೋದರು ಅನ್ನೋ ಭೀಕರ ಸತ್ಯವನ್ನ ವಿಶ್ವಾಸ್ ವಿವರಿಸಿದ್ದಾರೆ. ವಿಮಾನದಲ್ಲಿ ನನ್ನ ಸೀಟ್ ನಂಬರ್ 11ಎ ಆಗಿತ್ತು ಅದು ತುರ್ತು ನಿರ್ಗಮನ ಬಾಗಿಲ ಪಕ್ಕದಲ್ಲೇ ಇತ್ತು. ಆದರೆ ನಾನು ಬದುಕಿ ಬಂದದ್ದು ನಿಜಕ್ಕೂ ಪವಾಡವೇ ಸರಿ ಅಂತಾ ಅವರು ಅಭಿಪ್ರಾಯಪಟ್ಟಿದ್ದಾರೆ.