ತನ್ನ ಶವಪೆಟ್ಟಿಗೆ ತಾನೇ ಅಂತಿಮ ಮೊಳೆ ಹೊಡೆದುಕೊಳ್ತಾ ಪಾಕಿಸ್ತಾನ್ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ. ಸುಮ್ಮನಿದ್ದವರನ್ನು ಕೆಣಕಿ ತನ್ನ ವಿನಾಶವನ್ನು ತಾನೇ ಆಹ್ವಾನಿಸಿಕೊಳ್ತಾ?.ಮನೆಯೊಳಗೆ ನುಗ್ಗಿ ನಮ್ಮವರೆದೆಯನ್ನೇ ಸೀಳಿದ ಹೀನಾತಿ ಹೀನರನ್ನು ಸದೆ ಬಡಯಲೇ ಬೇಕಿದೆ. ನಮ್ಮ ಮನೆ ಹೆಣ್ಣುಮಕ್ಕಳ ಹಣೆ ಸಿಂಧೂರ ಅಳಿಸಿ ಹಾಕಿದ ಕಟುಕರನ್ನು ಬೇಟೆಯಾಡಲೇಬೇಕಿದೆ. ಹಾಗಿದ್ದರೆ ಪಾಕಿಸ್ಥಾನದ ವಿರುದ್ಧ ಮೋದಿ ರೂಪಿಸ್ತಿರುವ ರಣವ್ಯೂಹ ಹೇಗಿದೆ ಗೊತ್ತಾ?
ಬೇಟೆಗಾರರನ್ನೇ ಬೇಟೆಯಾಡುವ ರಣಬೇಟೆಗಾರನ ಎಂಟ್ರಿ
ಯೆಸ್….ಇದು ಏಳು ದಶಕಗಳಿಂದ ಬಿಟ್ಟೂ ಬಿಡದೆ ನಡೆದಿರುವ ಸಮರ. ಅಖಂಡ ಭಾರತದಿಂದ ತುಂಡಾಗಿ ಹೋದ ಪಾಕಿಸ್ಥಾನ ಅಂದಿನಿಂದ ಇಂದಿನವರೆಗೂ ತನ್ನ ಶಕುನಿ ಬುದ್ಧಿಯನ್ನು ಬದಲಿಸಿಕೊಳ್ಳುವ ಜಾಯಮಾನ ಕಾಣುತ್ತಿಲ್ಲ. 1947ರಿಂದಲೇ ಆರಂಭವಾದ ಈ ಸಮರದ ಅಧ್ಯಾಯ ಮುಂದೆ 1965, 1971 ಹಾಗೂ 1999ರಲ್ಲಿ ಕಾಲ್ಕೆರೆದು ಜಗಳಕ್ಕೆ ನಿಂತು ಮಕಾಡೆ ಮಲಗಿಯಾಗಿದೆ. ತನ್ನ ಜನರ ಮುಂದಲ್ಲದೆ ಸಮಸ್ತ ವಿಶ್ವ ಸಮುದಾಯದ ಮುಂದೆಯೂ ಪಾಕಿಗಳ ಗರ್ವಭಂಗವಾಗಿದೆ. ಆದರೆ, ನೇರ ಎದೆಗೆ ಎದೆಕೊಟ್ಟು ಸೆಣೆಸುವಲ ತಾಕತ್ತಿಲ್ಲದ ಪಾಕಿಗಳು ತನ್ನ ಪಾಪದ ಕೂಸು ಉಗ್ರರನ್ನು ಭಾರತದ ವಿರುದ್ಧ ಛೂಬಿಟ್ಟು ಷಡ್ಯಂತ್ರ ಹೆಣೆಯುತ್ತಿದೆ. ಆದರೀಗ ಭಾರತವೂ ಸುಮ್ಮನೆ ಕೂರುವ ಇರಾದೆಯಲ್ಲಿಲ್ಲ. ಬದಲಿಗೆ ಪಾಕಿಸ್ಥಾನಕ್ಕೊಂದು ಶಾಶ್ವತ ಪಾಠ ಹೇಳೋ ಧಾವಂತದಲ್ಲಿದೆ. ಹೀಗಾಗಿಯೇ ಮೋದಿ ಈ ಬಾರಿ ರಣಬೇಟೆಗಾರನಾಗಿಯೇ ಅಖಾಡಕ್ಕಿಳೀತಾರ ಅನ್ನೋ ಪ್ರಶ್ನೆ ಮೂಡಿದೆ.
ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಯಾವುದು ಮೊದಲು
28 ಅಮಾಯಕ ಜೀವಗಳನ್ನು ಆಹುತಿ ಪಡೆದ ಉಗ್ರರ ಬೇಟೆಯಾಡಲು ಭಾರತ ರಣತಂತ್ರ ರೂಪಿಸುತ್ತಿದೆ. ಈಗಾಗಲೇ ಎನ್ ಐಎ ತನಿಖೆ ಆರಂಭಿಸಿದ್ದು, ಜಿಹಾದಿಗಳ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ. ಅಷ್ಟೇ ಅಲ್ಲಾ ಸುಳಿವು ನೀಡಿದವರಿಗೆ 20 ಲಕ್ಷ ರೂ. ಇನಾಮು ಘೋಷಿಸಲಾಗಿದೆ. ಇದರ ನಡುವೆಯೇ ಸೌದಿಯಿಂದ ಬರುತ್ತಿದ್ದಂತೆ ಅಖಾಡಕ್ಕಿದಿರುವ ಮೋದಿ, ಪಾಕಿಸ್ಥಾನದ ಕುಮ್ಮಕ್ಕಿನ ಮುಖವನ್ನು ಜಗತ್ತಿನ ಮುಂದೆ ಬಯಲು ಮಾಡಲು ರಣವ್ಯೂಹ ಹೆಣೆದಿದ್ದಾರೆ. ಪುಲ್ವಾಮಾ ಪ್ರತೀಕಾರಕ್ಕೆ ನಡೆದ ಸರ್ಜಿಕಲ್ ಸ್ಟ್ರೈಕ್ ಮತ್ತೆ ನಡೆಯುತ್ತಾ ಇಲ್ಲಾ ವೈಮಾನಿಕ ದಾಳಿಯೇ ಆಗುತ್ತಾ ಅನ್ನೋದು ಪ್ರಶ್ನೆ.
ಪಿಒಕೆ ಕೈವಶಕ್ಕೆ ಕೂಡಿ ಬಂತಾ ಸುವರ್ಣಕಾಲ
ಭಾರತದ ಮುಕುಟ ಮಣಿ ಕಾಶ್ಮೀರದ ಭಾಗವನ್ನು ಆಕ್ರಮಿಸಿಕೊಂಡು ಕೂತಿರುವ ಪಾಕಿಸ್ತಾನ ವಿರುದ್ಧವೀಗ ಯುದ್ಧವೇ ನಡೆಯುತ್ತಾ? ಪಿಒಕೆ ಕೈವಶಕ್ಕಿದು ಸುವರ್ಣಾವಕಾಶ ಅಂತಲೇ ಬಣ್ಣಿಸಲಾಗುತ್ತಿದ್ದು, ಅಲ್ಲೇ ಕೂತು ವಿಷ ವ್ಯೂಹ ಹೆಣೆಯುತ್ತಿರುವ ಉಗ್ರರ ಹುಟ್ಟಡಗಿಸಲು ಪ್ಲ್ಯಾನ್ ಸಿದ್ಧವಾಗುತ್ತಿದೆ ಎನ್ನಲಾಗುತ್ತಿದೆ. 114ಕ್ಕೂ ಹೆಚ್ಚು ಉಗ್ರ ಸಂಘಟನೆಗಳು ಪಿಒಕೆ ವ್ಯಾಪ್ತಿಯಲ್ಲಿ ಜೀವಂತವಾಗಿದ್ದು, 40 ಹೆಚ್ಚು ಲಾಂಚ್ ಪ್ಯಾಡ್ ಗಳಿವೆ ಎನ್ನುವುದು ಬಯಲಾಗಿದೆ. ಹೀಗಾಗಿ ಈ ಬಾರಿ ಮೋದಿಯ ಟಾರ್ಗೆಟ್ ಪಿಒಕೆ ಎನ್ನಲಾಗುತ್ತಿದ್ದು, ಕಬ್ಜಾ ಆಗಿರುವ ಭಾರತದ ನೆಲವನ್ನು ಮತ್ತೆ ಮರಳಿ ಪಡೆಯುವ ಎಲ್ಲ ಸಿದ್ಧತೆ ನಡೆದಿವೆ ಎನ್ನಲಾಗುತ್ತಿದೆ.
ಭಾರತದ ಜೇಮ್ಸ್ ಬಾಂಬ್ ಹೆಗಲಿಗೆ ಹೊಣೆಗಾರಿಕೆ
ಪಾಕಿಸ್ತಾನದ ಮಣ್ಣಲ್ಲಿ ಪಾಕ್ ಪ್ರಜೆಯಂತೆ ಬದುಕಿ ಭಾರತದ ಬೇಹುಗಾರಿಕಾ ಲೋಕದಲ್ಲೇ ಅಚ್ಚಳಿಯದಂತೆ ಉಳಿದ ಹೆಸರು ಅಜಿತ್ ದೋವಾಲ್. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಅಜಿತ್ ದೋವಲ್ ಗೆ ಇದೀಗ ಮೋದಿ ದೊಡ್ಡ ಟಾಸ್ಕ್ ನೀಡಿದ್ದಾರೆ. ಪಹಲ್ಗಾಂ ದಾಳಿಯ ಹಿಂದಿನ ಪ್ರತಿಯೊಬ್ಬರನ್ನೂ ಹೆಕ್ಕಿ ತೆಗೆದು ಸಂಹರಿಸುವ ಕಾರ್ಯವನ್ನು ಮೋದಿ, ದೋವಲ್ ಗೆ ನೀಡಿದ್ದಾರೆ. ಅಂದು ಸರ್ಜಿಕಲ್ ಸ್ಟ್ರೈಕ್ ಪ್ಲ್ಯಾನ್ ರೂಪಿಸಿದ್ದ ದೋವಾಲ್ ಇದೀಗ ತೆಗೆದುಕೊಳ್ಳುವ ನಿರ್ಧಾರ ಪಾಕಿಸ್ಥಾನವನ್ನ ವಿಶ್ವ ಭೂಪಟದಿಂದಲೇ ಸರ್ವನಾಶ ಮಾಡಿಬಿಡುತ್ತಾ? ಎನ್ನುವ ಪ್ರಶ್ನೆ ಹುಟ್ಟಿಸುತ್ತಿದೆ. ಏನೇ ಆದರೂ ಪ್ರತೀಕಾರದ ಝೇಂಕಾರ ದೇಶವ್ಯಾಪಿ ಮೊಳಗುತ್ತಿದೆ. ಹೀಗಾಗಿ ಭಾರತದ ಮುಂದಿನ ಹೆಜ್ಜೆ ನಿಜಕ್ಕೂ ಪಾಕಿಸ್ಥಾನಿಗಳ ಎದೆಯನ್ನು ನಡೆಗಿಸುತ್ತಿರೋದಂತೂ ಸುಳ್ಳಲ್ಲ.