ರಾಜ್ಯ ಕಾಂಗ್ರೆಸ್ ಸರ್ಕಾರವೀಗ ಹಗರಣಗಳ ಬೆಂಕಿಯಲ್ಲಿ ಬೇಯುತ್ತಿದೆ. ಹೀಗಿರುವಾಗಲೇ ಈ ಬದಲಾವಣೆಯ ಬಾಂಬ್ ಸ್ಫೋಟ ತೀವ್ರ ಕುತೂಹಲ ಕೆರಳಿಸಿದೆ.
ಈಗಾಗಲೇ ದೆಹಲಿ ನಾಯಕರು ಸಿಎಂ ನಡೆಯ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿ.ಆರ್. ಪಾಟೀಲ್ ಸೇರಿದಂತೆ ಬಹಿರಂಗ ಹೇಳಿಕೆ ನೀಡಿರುವ ನಾಯಕರನ್ನು ನಿಯಂತ್ರಿಸುವಲ್ಲಿ ಸಿದ್ದರಾಮಯ್ಯ ಎಡವಿದ್ದಾರೆ ಅಂತಾ ಬೇಸರ ವ್ಯಕ್ತಪಡಿಸಲಾಗಿದೆ.
ಹೀಗಾಗಿ ದೆಹಲಿಯಿಂದ ವಾಪಸ್ ಆಗುತ್ತಿದ್ದಂತೆ ಸಿಎಂ ಅತೃಪ್ತರನ್ನು ಕರೆದು ಮಾತನಾಡಿದ್ದಾರೆ. ಅಷ್ಟೇ ಅಲ್ಲಾ, ಬಹಿರಂಗ ಹೇಳಿಕೆಗಳ ಬಾಯಿಗೆ ಬೀಗ ಹಾಕಿಕೊಳ್ಳುವಂತೆ ಕಟ್ಟಪ್ಪಣೆ ಮಾಡಿದ್ದಾರೆ. ಹಾಗಿದ್ದರೆ, ಈ ಬದಲಾವಣೆ ಕೂಗು ವಿಷಯಾಂತರ ಮಾಡುವ ಹುನ್ನಾರವಾ ಅನ್ನೋ ಅನುಮಾನ ಮೂಡಿಸಿದೆ. ಬೀಸೋ ದೊಣ್ಣೆಯಿಂದ ಪಾರಾಗಿ ಸರ್ಕಾರಕ್ಕಾಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಗೆ ಈ ಬದಲಾವಣೆಯ ಬಾಂಬ್ ಒಂದು ತಂತ್ರವಾ ಅನ್ನೋ ಚರ್ಚೆ ನಡೆದಿದೆ. ಇಲ್ಲಾ ನಿಜಕ್ಕೂ ಆಗಸ್ಟ್, ಸೆಪ್ಟಂಬರ್ ನಲ್ಲಿ ಬದಲಾವಣೆ ನಿಶ್ತಿತವಾ?. ಇಲ್ಲಾ ಅದಕ್ಕೂ ಮುನ್ನವೇ ಕ್ರಾಂತಿಯೇ ಆಗುತ್ತಾ ಅನ್ನೋದು ಸದ್ಯದ ಪ್ರಶ್ನೆ.