ಅಪಘಾತದಲ್ಲಿ ಗಾಯಗೊಂಡಿದ್ದ ಪಿಎಸ್ ಐ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಲಘಟ್ಟಪುರ ಪಿಎಸ್ಐ ಮೆಹಬೂಬ್ ಗುಡ್ಡಳ್ಳಿ(40) ಸಾವನ್ನಪ್ಪಿದವರು. ಜೂನ್ 24ರಂದು ಗಾಂಜಾ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕರೆತರುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಅತ್ತಿಬೆಲೆಯಿಂದ ಬೆಂಗಳೂರು ಕಡೆ ಬರುತ್ತಿದ್ದ ಸಂದರ್ಭದಲ್ಲಿ ಕಾರು ಕೆಟ್ಟು ನಿಂತಿತ್ತು. ಟೈಯರ್ ಕಳಚಿ ಕಾರು ನಡುರಸ್ತೆಯಲ್ಲೇ ನಿಂತಿತ್ತು. ಹೀಗಾಗಿ ಪಿಎಸ್ ಐ ಮೆಹಬೂಬ್ ಕೆಳಗೆ ಇಳಿದು ನೋಡುತ್ತಿದ್ದರು. ಆ ವೇಳೆ ವೇಗವಾಗಿ ಬಂದ ಲಾರಿ, ಡಿಕ್ಕಿ ಹೊಡೆದಿತ್ತು. ಪಿಎಸ್ ಐ ಮೆಹಬೂಬ್ ಸಹಿತ ಕಾರಿಗೆ ಲಾರಿ ಗುದ್ದಿತ್ತು.
ಹೀಗಾಗಿ ಅಪಘಾತದಲ್ಲಿ ಮೆಹಬೂಬ್ ಗಂಭೀವಾಗಿ ಗಾಯಗೊಂಡಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.