ಪಾಕಿಸ್ತಾನ ವಿರುದ್ಧ ಸಮರ ಸಾರಿರುವ ಭಾರತ, ನಿರಂತರ ಕ್ಷಿಪಣಿ ದಾಳಿ ಮುಂದುವರಿಸಿದೆ. ಬಾನಂಗಳದಿಂದ ಭೋರ್ಗರೆದು ಬರುತ್ತಿರುವ ಬಾಂಬಿನ ಮಳೆ ಪಾಕ್ ನಿರ್ನಾಮಕ್ಕೆ ಮುನ್ನುಡಿ ಬರೆದಿದೆ. ಮಹಾಭಾರತದ ಕುರುಕ್ಷೇತ್ರ ಯುದ್ಧಕ್ಕೆ ಪಾಂಚಜನ್ಯ ಮೊಳಗಿಸಿದರುವ ಮೋದಿ, ಪಾಕಿಗಳ ದುರಂಹಾರವನ್ನು ಬಗ್ಗು ಬಡೆಯುವ ಸಂಕಲ್ಪ ಮಾಡಿದ್ದಾರೆ. ಇದಕ್ಕಾಗಿಯೇ ಭಾರತೀಯ ಸೇನೆ ಪರಮ ಪಾಪಿಗಳ ವಿರುದ್ಧ ತನ್ನ ಶಕ್ತಿಶಾಲಿ ತ್ರಿಶೂಲ ವ್ಯೂಹವನ್ನು ರಚಿಸಿ ಸಂಹಾರ ಕಾರ್ಯಕ್ಕೆ ನಾಂದಿ ಹಾಡಿದೆ. ಈ ತ್ರಿಶೂಲ ವ್ಯೂಹದ ಆರ್ಭಟಕ್ಕೆ ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಂ ಸಂಪೂರ್ಣ ಮಕಾಡೆ ಮಲಗಿದೆ.
ಭಾರತದ ಬತ್ತಳಿಕೆಯಲ್ಲಿ ಇಸ್ರೇಲ್ ನ ಹಾರ್ಪಿ
ಪಾಕಿಸ್ತಾನದ ಗರ್ವಭಂಗದ ಅಧ್ಯಾಯ ಆರಂಭವಾಗಿದೆ. ಉಗ್ರವಾದವನ್ನು ಅಸ್ತ್ರವಾಗಿಸಿ ಭಾರತದ ನೆಮ್ಮದಿ ಕದಡಿದ್ದವರ ಹುಟ್ಟಡಗಿಸುವ ಕಾರ್ಯ ಪ್ರಗತಿಯಲ್ಲಿದೆ. ಹಾಗಂತಾ ಇದು ಐತಿಹಾಸಿಕ ಸಮರ, 75 ವರ್ಷಗಳ ಇತಿಹಾಸದರಲ್ಲಿ ಇದೇ ಮೊದಲ ಬಾರಿ ಪಾಕಿಸ್ತಾನದೊಳಗೆ ನುಗ್ಗಿ ಆಬ್ಬರಿಸಲಾಗುತ್ತಿದೆ. ಇದಕ್ಕಾಗಿ ಭಾರತದ ಅತ್ಯಂತ ಶಕ್ತಿಶಾಲಿ ಅಸ್ತ್ರ ಹಾರ್ಪಿಯನ್ನು ಬಳಸಲಾಗುತ್ತಿದೆ.
ಇಸ್ರೇಲ್ ನಿರ್ಮಿತ ಅತ್ಯಾಧುನಿಕ ಡ್ರೋನ್ ಆಗಿರುವ ಹಾರ್ಪಿ ರೆಡಾರ್ ಗಳನ್ನೇ ಧ್ವಂಸ ಮಾಡುವ ತಾಕತ್ತು ಹೊಂದಿವೆ. ಬಾನಲ್ಲಿ ನಿರಂತರವಾಗಿ 9 ಗಂಟೆಗಳ ಕಾಲ ಹಾರಾಟ ನಡೆಸುವ ತಾಕತ್ತಿನ ಹಾರ್ಪಿ. 1 ಸಾವಿರ ಕಿಲೋಮೀಟರ್ ಹಗಲು ರಾತ್ರಿ ದಣಿವರೆಯದೆ ದುಡಿಯುವ ಸಾಮರ್ಥ್ಯ ಹೊಂದಿದೆ. ಇದೇ ಹಾರ್ಪಿಯನ್ನ ಬಳಸಿಯೇ ಪಾಕಿಸ್ತಾನದ ಲಾಹೋರ್, ರಾವಲ್ಪಿಂಡಿ, ಇಸ್ಲಾಮಾಬಾದ್ ಗಳನ್ನು ಉಡಾಯಿಸಲಾಗುತ್ತಿದೆ.
ಕರಾಚಿ ಬಂದರನ್ನು ಛಿದ್ರವಾಗಿಸಿದ ಐಎನ್ ಎಸ್ ವಿಕ್ರಾಂತ್
ಇನ್ನು ಪಾಕಿಸ್ತಾನ ನಿನ್ನೆ ಭಾರತದ 15 ನಗರಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿತ್ತು. ಪಂಜಾಬ್, ರಾಜಸ್ಥಾನ, ಜಮ್ಮುವಿನ ಮೇಲೆ ಕ್ಷಿಪಣಿ ದಾಳಿಯ ವಿಫಲ ಯತ್ನವನ್ನು ಮಾಡಲಾಗಿತ್ತು. ಆದರೆ, ಇದನ್ನು ಭಾರತದ ಸುದರ್ಶನ ಚಕ್ರ ಹಿಮ್ಮೆಟ್ಟಿಸಿದೆ. ರಷ್ಯಾ ನಿರ್ಮಿತ ಎಸ್ 400 ಏರ್ ಡಿಫೆನ್ಸ್ ಸಿಸ್ಟಂ ಪಾಕಿಗಳ ಕ್ಷಿಪಣಿ ದಾಳಿಯನ್ನು ಊಸ್ಟ್ ಮಾಡಿದೆ. 600 ಕಿಲೋಮೀಟರ್ ದೂರದಿಂದಲೇ ಪಾಕಿಗಳ ಕ್ಷಿಪಣಿಯನ್ನು ಪತ್ತೆ ಹಚ್ಚುವ ತಾಕತ್ತಿನ ಎಸ್ 400 ಆಗಸದಲ್ಲೇ ಅವುಗಳನ್ನು ಚಿಂದಿ ಉಡಾಯಿಸಿದೆ. ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಈ ಸುದರ್ಶನ ಚಕ್ರ ಕಾವಲಿಗೆ ನಿಂತಿದೆ.
ಇನ್ನು ನಿನ್ನೆಯ ದಾಳಿಯಲ್ಲಿ ಪಾಕಿಸ್ತಾನದ ಐದು ಜೆಎಫ್ 17 ಮತ್ತು ಎಫ್ 16 ಯುದ್ಧ ವಿಮಾನಗಳನ್ನು ಭಾರತ ಧರೆಗುರುಳಿಸಿವೆ. ಅಷ್ಟೇ ಅಲ್ಲಾ ಇಬ್ಬರು ಪಾಕ್ ಪೈಲೆಟ್ ಗಳನ್ನು ಭಾರತ ಬಂಧಿಸಿದೆ. ಈ ನಡುವೆ, ಕರಾಚಿಯನ್ನು ತನ್ನ ಟಾರ್ಗೆಟ್ ಮಾಡಿದ್ದ ಭಾರತ ಇದೇ ಮೊದಲ ಬಾರಿ ಐಎನ್ ಎಸ್ ವಿಕ್ರಾಂತ್ ನನ್ನು ಸಮರಾಂಗಣಕ್ಕೆ ಇಳಿಸಿತ್ತು. ಬಲ ಭೀಮ ವಿಕ್ರಾಂತ್ ದಾಳಿಗೆ ಪಾಕಿಸ್ತಾನದ ಕರಾಚಿಯ ಪ್ರಮುಖ ಬಂದರು ಉಡೀಸ್ ಆಗಿದೆ.