ಅಂತಾರಾಷ್ಟ್ರೀಯ ಬಾಹ್ಯಾಕಾಶ ಲೋಕದಲ್ಲಿ ಭಾರತದ ತಿರಂಗಾ ರಾರಾಜಿಸಿದೆ. 41 ವರ್ಷಗಳ ಬಳಿಕ ಭಾರತದ ಕೀರ್ತಿ ಪತಾಕೆ ಮತ್ತೆ ಆಗಸದಲ್ಲಿ ಹೊಸ ಭಾಷ್ಯ ಬರೆದಿದೆ.
ನಿನ್ನೆ ಸಂಜೆ ಸುರಕ್ಷಿತವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು ಭಾರತೀಯ ಶುಭಾಂಶು ಶುಕ್ಲಾ ತಲುಪಿದ್ದಾರೆ. ಅಷ್ಟೇ ಅಲ್ಲಾ, ನಾನೀಗ ಹಗುರವಾಗಿದ್ದೇನೆ. ಅಂತರಿಕ್ಷ ನಿಲ್ದಾಣಕ್ಕೆ ಬಂದಿರುವುದು ಒಂದು ಸೌಭಾಗ್ಯ. ಇದು ಈ ಪ್ರಯಾಣದ ಮೊದಲ ಹೆಜ್ಜೆ. ನಾನು ತಿರಂಗಾವನ್ನು ಮತ್ತು ನಿಮ್ಮೆಲ್ಲರನ್ನೂ ನನ್ನೊಂದಿಗೆ ಹೊತ್ತು ತಂದಿದ್ದೇನೆ.
ಮುಂದಿನ 14 ದಿನಗಳು ರೋಮಾಂಚಕ ಮತ್ತು ಅತ್ಯದ್ಭುತವಾಗಿರುತ್ತವೆ. ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಪ್ರಗತಿಗೆ ಈ 14 ದಿನಗಳು ಕಾರಣವಾಗಿರುತ್ತವೆ ಅಂತಾ ಶುಭಾಂಶು ಸಂದೇಶ ರವಾನಿಸಿದ್ದಾರೆ. ಈ ಮೂಲಕ 140 ಕೋಟಿ ಭಾರತೀಯರ ಕನಸನ್ನು ಅವರು ನನಸಾಗಿದ್ದಾರೆ. ಅಷ್ಟೇ ಅಲ್ಲಾ ಭಾರತದ ಬಾಹ್ಯಾಕಾಶ ಸಂಶೋಧನೆ ಮತ್ತು ಸ್ವಂತ ಬಾಹ್ಯಾಕಾಶ ಕೇಂದ್ರ ನಿರ್ಮಾಣದ ಕನಸಿಗೀಗ ಶುಭಾಂಶು ನೀರೆರದಿದ್ದಾರೆ.