ಆಪರೇಷನ್ ಸಿಂಧೂರದ ಬಳಿಕ ಒಳಗೊಳಗೇ ಕುದಿಯುತ್ತಿರುವ ಪಾಕ್ ಗಡಿಯಲ್ಲಿ ಬಾಲ ಬಿಚ್ಚಿದೆ. ಬುಧವಾರ ಮಧ್ಯರಾತ್ರಿ 1.10ರಿಂದ 1.20ರ ಅಂತದಲ್ಲಿ ಪಾಪಿ ಪಾಕ್ ಭಾರತದ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಅಮೃತಸರದ ಹೋಶಿಪುರ ಬಳಿ ಈ ಕ್ಷಿಪಣಿಗಳು ಕಾಣಿಸಿಕೊಂಡಿದ್ದು, ಭಾರತದ ಏರ್ ಡಿಫೆನ್ಸ್ ಸಿಸ್ಟಮ್ ಎದುರಾಳಿಗಳ ಯೋಜನೆಯನ್ನು ಮಕಾಡೆ ಮಲಗಿಸಿದೆ.

ಪಾಕಿಗಳ ಕ್ಷಿಪಣಿಯನ್ನು ಗ್ರಹಿಸಿದ ಏರ್ ಡಿಪೆನ್ಸ್ ಸಿಸ್ಟಮ್, ನಿಗದಿತ ದಾಳಿ ಮಾಡಿ ಹೊಡೆದುರುಳಿಸಿದೆ. ಇದರ ಸದ್ದು ಸುತ್ತಮುತ್ತಲ ಹಳ್ಳಿಗಳಲ್ಲಿ ಪ್ರತಿಧ್ವನಿಸಿದೆ. ಪಾಕಿಸ್ತಾನ ಭಾರತದ ಪಂಜಾಬನ್ನು ಗುರಿಯಾಗಿಸಿ ಚೀನಾ ನಿರ್ಮಿತ 2 ಕ್ಷಿಪಣಿಗಳನ್ನು ಲಾಂಚ್ ಮಾಡಿತ್ತು. ಆದ್ರೆ, ಹೋಶಿಪುರ ಬಳಿ ಭಾರತದ ಪಿಎಲ್ ಎಲ್ 15, ಆ 2 ಕ್ಷಿಪಣಿಗಳನ್ನು ಕ್ಷಣಾರ್ಧದಲ್ಲಿ ಉಡೀಸ್ ಮಾಡಿದೆ. ಈ ಮೂಲಕ ಪಾಕಿಗಳ ಕುತಂತ್ರವನ್ನು ಮಟ್ಟಹಾಕಲಾಗಿದೆ.