ಭಾರತದ ಇತಿಹಾಸದಲ್ಲಿ ಮೇ 6ರ ಮಧ್ಯರಾತ್ರಿಯ 1.44ರ ಸಮಯವನ್ನ ಇಂದಿಗು, ಎಂದಿಗು, ಎಂದೆಂದಿಗೂ ಸುವರ್ಣಾಕ್ಷರದಲ್ಲಿ ಬರದಿಡುವಂತಹ ಐತಿಹಾಸಕ ದಿನವಾಗಿದೆ. ಇದು ನಿಜಕ್ಕೂ ಅಂತಿಂಥಾ ಸುಸಂದರ್ಭವಲ್ಲ. ಸಮಸ್ತ ಭಾರತೀಯರು ಇಂದು ದೀಪಾವಳಿ ಆಚರಿಸಬಹುದಾಗಿ, ನಮ್ಮ ಸಹೋದರಿಯರ ಹಣೆಯ ಕುಂಕುವನ್ನು ಅಳಿಸಿದ ಮತಾಂಧ ರಾಕ್ಷಸರ ಹಣೆಗೇ ಭಾರತ ನೇರ ಗುಂಡು ನುಗ್ಗಿಸಿದೆ. ಈ ಮೂಲಕ ಮುಯ್ಯಿಗೆ ಮುಯ್ಯಿ ಅಂತಾ ಘೋಷಿಸಿದೆ.
ಜೈಷ್ ಎ ಮೊಹಮ್ಮದ್ ನ ಸಾಮ್ರಾಜ್ಯ ಉಡೀಸ್
ಪಾಕಿಸ್ಥಾನದ ದಕ್ಷಿಣದ ಪಂಜಾಬ್ ಪ್ರಾಂತದಲ್ಲಿರುವ ಬಹಾವಲ್ಪುರ್ ಭಾರತೀಯ ಸೇನೆಯ ಮೊದಲ ಟಾರ್ಗೆಟ್ ಆಗಿತ್ತು. ಜೈಷ್ ಎ ಮೊಹಮ್ಮದ್ ಇದೇ ಬಹಾವ್ಲಪುರದಲ್ಲಿ ದಶಕಗಳಿಂದ ತನ್ನ ಸಾಮ್ರಾಜ್ಯ ಕಟ್ಟಿ ಮೆರೆಯುತ್ತಾ ಕೂತಿತ್ತು. ಹೀಗಾಗಿ ಆಪರೇಷನ್ ಸಿಂಧೂರದ ಮೊದಲ ಟಾರ್ಗೆಟ್ ಜೈಷ್ ನ ಕೇಂದ್ರ ಸ್ಥಳವನ್ನು ಉಡಾಯಿಸುವುದೇ ಆಗಿತ್ತು. 2001ರ ಸಂಸತ್ ದಾಳಿ, 2019ರ ಪುಲ್ಮಾಮ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ನ ಆವಾಸ ಸ್ಥಾನವನ್ನು ಈಗ ಹೇಳ ಹೆಸರಿಲ್ಲದಂತೆ ಮಾಡಲಾಗಿದೆ.
ಸುಟ್ಟು ಬೂದಿಯಾದ ಮುರಿಡ್ಕೆಯ ಲಷ್ಕರ್ ಕ್ಯಾಂಪ್
ಟಾರ್ಗೆಟ್ ಎರಡು ಪಾಕಿಸ್ತಾನದ ಲಾಹೋರನ ಉತ್ತರಕ್ಕಿರುವ ಮುರಿಡ್ಕೆ. ಯೆಸ್ ಈ ಮುರಿಡ್ಕೆ, 2008ರಲ್ಲಿ ನಡೆದ ಮುಂಬೈ ದಾಳಿಕೋರು ಇಲ್ಲೇ ತರಬೇತಿ ಪಡೆದದ್ದು. ಲಷ್ಕರ್ ಎ ತೋಯ್ಬಾ ಸಂಘಟನೆಯ ಕೇಂದ್ರ ಸ್ಥಾನವಾಗಿರುವ ಈ ಮುರಿಡ್ಕೆ ಕ್ಯಾಂಪ್ 200 ಎಕರೆ ವ್ಯಾಪ್ತಿಯಲ್ಲಿ ಹರಡಿದೆ. ವಿಶಾಲವಾದ ಟ್ರೈನಿಂಗ್ ಕ್ಯಾಂಪ್, ಧಾರ್ಮಿಕ ಭಾಷಣಗಳಿಗೆ ಸೆಮಿನಾರ್ ಹಾಲ್, ಅತ್ಯಾಧುನಿಕ ಶಸ್ತ್ರಾಗಳ ಸಂಗ್ರಹಗಾರವೂ ಇಲ್ಲೇ ಇದೆ. ಅಷ್ಟೇ ಅಲ್ಲಾ ಲಷ್ಕರ್ ನ ಪಾಪದ ಕೂಸು ಜಮಾತ್ ಉದ್ ದಾವ ಸಂಘಟನೆಯ ಪಾಪ ಕೃತ್ಯಗಳಿಗೂ ಇದೇ ಕೇಂದ್ರ ಸ್ಥಾನ.
ಆತ್ಮಾಹುತಿ ಬಾಂಬ್ ದಾಳಿ ತರಬೇತಿ ಕೇಂದ್ರ ಸರ್ವನಾಶ
ಕೋಟ್ಲಿ…ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಈ ಕ್ಯಾಂಪ್ ನಲ್ಲೇ ಜಿಹಾದಿಗಳ ಆತ್ಮಾಹುತಿ ಬಾಂಬ್ ದಾಳಿಕೋರರ ಸೃಷ್ಟಿಯಾಗೋದು. ಆತ್ಮಾಹುತಿ ಬಾಂಬ್ ದಾಳಿಕೋರರ ತಯಾರಿಗೆ ಬೇಕಾದ ಸಕಲ ವ್ಯವಸ್ಥೆ ಹೊಂದಿದ್ದ ಈ ತಾಣದಲ್ಲಿ 50ಕ್ಕೂ ಹೆಚ್ಚು ತರಬೇತಿ ಪಡೆದ ರಾಕ್ಷಸರಿದ್ರು. ಆದ್ರೆ ನಿನ್ನೆ ರಾತ್ರಿಯ ದಾಳಿಯಲ್ಲಿ ಈ ಕ್ಯಾಂಪ್ ಆಹುತಿಯಾಗಿದೆ.
ಪೂಂಚ್-ರಜೌರಿ ದುಶ್ಕೃತ್ಯಗಳ ಅಡಗುದಾಣ ನಾಮಾವಶೇಷ
ಜಮ್ಮು-ಕಾಶ್ಮೀರದಲ್ಲಿ ಶಾಂತಿ ಕದಡುವ ಕಾರ್ಯ ನಡೆಯುತ್ತಿದ್ದದ್ದೇ ಈ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಗುಲ್ಫುರ್ ನಲ್ಲಿ. 2023-24ರಲ್ಲಿ ಸೇನೆಯ ಮೇಲೆ ನಡೆದ ದಾಳಿಗಳ ರಣತಂತ್ರಗಳೆಲ್ಲಾ ಸಿದ್ಧವಾಗಿದ್ದು ಮತ್ತು ಉಗ್ರರಿಗೆ ನೆಲೆ ಒದಗಿಸಿದ್ದ ಗುಲ್ಫುರ್ ನೆಲೆಯನ್ನೂ ಇನ್ನಿಲ್ಲದಂತಾಗಿಸಿದೆ.
ಹಿಜ್ಬುಲ್ ಉಗ್ರರ ಆವಾಸ ಸ್ಥಾನವೇ ಸುಟ್ಟುಬೂದಿ
ಇನ್ನು ಹಿಜ್ಬುಲ್ ಸಂಘಟನೆಯ ಕೇಂದ್ರ ಸ್ಥಾನವಾಗಿದ್ದ ಮೆಹ್ಮೋನಾ ಕ್ಯಾಂಪ್ ಕೂಡಾ ಆಪರೇಷನ್ ಸಿಂಧೂರದ ಟಾರ್ಗೆಟ್ ಆಗಿತ್ತು. ಉಗ್ರರಿಗೆ ಟ್ರೈನಿಂಗ್, ಶಸ್ತ್ರಾಸ್ತ ಪೂರೈಕೆ ಮತ್ತು ಹಣಕಾಸಿನ ನೆಟ್ ವರ್ಕ್ ನ ಕಚೇರಿ ಹೊಂದಿದ್ದ ಈ ತಾಣವನ್ನೂ ಉಡೀಸ್ ಮಾಡಲಾಗಿದೆ.
ಇದರೊಟ್ಟಿಗೆ ಸರ್ಜಿಲ್ ಮತ್ತು ಬರ್ನಾಲ್ ಉಗ್ರ ಕ್ಯಾಂಪ್ ಗಳಿಗೂ ಸಮಾಧಿ ಕಟ್ಟಲಾಗಿದೆ. ಈ ಮೂಲಕ ಭಾರತದ ಗಡಿ ನಿಯಂತ್ರಣ ರೇಖೆ ದಾಟಿ ಕಾಶ್ಮೀರದೊಳಗೆ ನುಗ್ಗಿಸಲು ಬಳಕೆಯಾಗ್ತಿದ್ದ ಎಲ್ಲ ಕ್ಯಾಂಪ್ ಗಳು ಈಗ ಸರ್ವನಾಶವಾಗಿವೆ. ಈ ಮೂಲಕ ಭಾರತದಲ್ಲಿ ಈವರೆಗೂ ರಕ್ತದೋಕುಳಿ ಆಡಿದವರ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯಲಾಗಿದೆ.