ಬೆಂಗಳೂರು: ಯುದ್ಧ ಅವಶ್ಯಕತೆ ಇಲ್ಲ ಎಂದಿರುವ ಸಿಎಂ ಸಿದ್ಧರಾಮಯ್ಯರ ಹೇಳಿಕೆ ಒಪ್ಪಲು ಅಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶಕ್ಕೆ ದೇಶವೇ ಇಂದು ಪಹಲ್ಗಾಮ್ನಲ್ಲಿ ನಡೆದ ಹತ್ಯಾಕಾಂಡವನ್ನು ಖಂಡಿಸುತ್ತಿದೆ. ಇಂತಹ ಘೋರ ಘಟನೆ ನಡೆದಾಗ ಅದನ್ನು ಖಂಡಿಸಿ, ದೇಶದ ಪರವಾಗಿ ನಿಲ್ಲವುದನ್ನು ಬಿಟ್ಟು, ಯುದ್ಧದ ಪರವಾಗಿಲ್ಲ ಅಂತಾರೆ ಅಂದರೆ, ಅವರ ಮನಸ್ಥಿತಿ ನೋಡಿ ಎಂದಿದ್ದಾರೆ.