ಬೆಂಗಳೂರು: ಜಾತಿ ಗಣತಿ ವರದಿ ಕುರಿತು ನಾಳೆ ಮಹತ್ವದ ವಿಶೇಷ ಸಚಿವ ಸಂಪುಟ ಸಭೆ ನಡೆಯುತ್ತಿದೆ.
ಸರ್ಕಾರದ ಜಾತಿ ಗಣತಿಯಿಂದಾಗಿ ರಾಜ್ಯ ಒಕ್ಕಲಿಗರು, ಲಿಂಗಾಯತ ಸಚಿವರು ಧರ್ಮ ಸಂಕಟದಲ್ಲಿದ್ದಂತಿದೆ. ಹೀಗಾಗಿ ಸಚಿವರು ಸಭೆಯಲ್ಲಿ ತಮ್ಮ ವೈಯಕ್ತಿಕ ಅಭಿಪ್ರಾಯ ಮಂಡಿಸಲಿದ್ದಾರೆ. ಸಮುದಾಯವಾರು ಸಚಿವರ ಅಭಿಪ್ರಾಯಗಳನ್ನು ಸಭೆಯಲ್ಲಿ ಸಂಗ್ರಹಿಸಲಾಗುತ್ತದೆ. ಆನಂತರ ಸಿಎಂ ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರಿಂದಲೇ ಜಾತಿ ಗಣತಿ ವರದಿ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಹೀಗಾಗಿ ವರದಿ ಅನುಷ್ಠಾನ ವಿಳಂಬವಾಗುವ ಸಾಧ್ಯತೆ ಇದೆ. ವರದಿ ಅಧ್ಯಯನಕ್ಕಾಗಿ ಸಬ್ ಕಮಿಟಿ ರಚನೆ ಮಾಡುಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸಾರ್ವಜನಿಕರ ಆಕ್ಷೇಪಪಣೆ, ಸಲಹೆ ನೀಡಲು ಕೂಡ ಸರ್ಕಾರ ಅವಕಾಶ ನೀಡಲು ಕೂಡ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಆ ಮೂಲಕ ಕೋಲ್ಡ್ ಸ್ಟೋರೆಜ್ ಗೆ ಜಾತಿಜನಗಣತಿ ವರದಿ? ಬೀಳಬಹುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.