ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯ ಆರೆಸ್ಸೆಸ್ ನ ಶಾಖಾ ಕಚೇರಿ ಕೇಶವ ಶಿಲ್ಪಾದಲ್ಲಿ ಇಂದು ಮಧ್ಯಾಹ್ನ ಬೈಠಕ್ ನಿಗದಿಯಾಗಿದೆ.
ಮಧ್ಯಾಹ್ನ 2 ಘಂಟೆಗೆ ಆರೆಸ್ಸೆಸ್ ಬಿಜೆಪಿ ಸಮನ್ವಯ ಬೈಠಕ್ ನಿಗದಿಯಾಗಿದೆ. ಕಳೆದ ವಾರ ಬಿಜೆಪಿಯ ರಾಜ್ಯ ನಾಯಕರನ್ನು ಕರೆಯಿಸಿಕೊಂಡು ಆರೆಸ್ಸೆಸ್ ಪ್ರಮುಖರ ಬೈಠಕ್ ನಡೆಸಿದ್ದರು.
ಅದರಂತೆ ಇಂದು ಮಧ್ಯಾಹ್ನ ಕೂಡ ಆರೆಸ್ಸೆಸ್ ನಾಯಕರು ಮಹತ್ವದ ಬೈಠಕ್ ನಡೆಸಲು ನಿರ್ಧರಿಸಿದ್ದಾರೆ. ಇಂದಿನ ಬೈಠಕ್ನಲ್ಲಿ ಆರೆಸ್ಸೆಸ್ ನ ಪ್ರಮುಖರು ಹಾಗೂ ಬಿಜೆಪಿ ರಾಜ್ಯ ನಾಯಕರು ಭಾಗಿಯಾಗಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ಕುಮಾರ್, ಶಾಸಕ ಡಾ.ಸಿ.ಎನ್. ಅಶ್ವಥ್ ನಾರಾಯಣ್, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.