ನಾನು ಏನು ಹೇಳ ಬೇಕು ಅಂತಾ ಅಂದುಕೊಂಡಿದ್ದೇನೋ ಅದೆನ್ನೆಲ್ಲ ಹೇಳಿದ್ದೇನೆ. ಮುಂದಿನ ನಿರ್ಧಾರ ಅವರಿಗೇ ಬಿಟ್ಟಿದ್ದು ಎಂದು ಬೆಂಗಳೂರಿನಲ್ಲಿ ಆಳಂದ ಶಾಸಕ ಬಿ.ಆರ್. ಪಾಟೀಲ್ ಹೇಳಿದ್ದಾರೆ.
ಹೈಕಮಾಂಡ್ ನಿಂದ ಕರೆ ಬಂದಿತ್ತು. ಅದಕ್ಕೇ ಬಂದಿದ್ದೆ. ರಣದೀಪ್ ಸುರ್ಜೇವಾಲಾ ಜೊತೆ ಸುದೀರ್ಘವಾಗಿ ಮಾತನಾಜಿದ್ದೇನೆ. ಅವರೂ ನಾನು ಹೇಳಿದ್ದನ್ನೆಲ್ಲಾ ನೋಟ್ ಮಾಡಿಕೊಂಡಿದ್ದಾರೆ. ನೋಡೋಣ ಮುಂದಿನ ತೀರ್ಮಾನ ಅವರಿಗೆ ಬಿಟ್ಟಿದ್ದು ಅಂತಾ ಬಿಆರ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಸುಮಾರು ಅರ್ಧ ತಾಸು ಉಭಯ ನಾಯಕರು ಮಹತ್ವದ ಚರ್ಚೆ ನಡಡೆಸಿದ್ದಾರೆ. ಈ ವೇಳೆ ವಸತಿ ಇಲಾಖೆ ಹಗರಣದ ಇಂಚಿಂಚೂ ಮಾಹಿತಿಯನ್ನು ಬಿ.ಆರ್. ಪಾಟೀಲ್ ವಿವರಿಸಿದ್ದಾರೆ. ಸಾಕ್ಷ್ಯ ಸಮೇತ ಎಲ್ಲವನ್ನೂ ಸುರ್ಜೇವಾಲ ಗಮನಕ್ಕೆ ಬಿ.ಆರ್ ಪಾಟೀಲ್ ತಂದಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಬಿ.ಆರ್. ಪಾಟೀಲ್ ತಮ್ಮ ಹೇಳಿಕೆಗೆ ಬದ್ಧವಾಗಿದ್ದು, ಹೈಕಮಾಂಡ್ ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುವುದು ಈಗಿರುವ ಪ್ರಶ್ನೆಯಾಗಿದೆ.