ಚಿತ್ರದುರ್ಗ: ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಚಿತ್ರದುರ್ಗ ತಾಲೂಕಿನ ದೇವಪುರದ ಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುಡಿಸಲಿನಲ್ಲಿ ಹಚ್ಚಿಟ್ಟಿದ್ದ ದೀಪದಿಂದ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿದೆ ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಇಡೀ ಗುಡಿಸಲು ಸಂಪೂರ್ಣವಾಗಿ ಸುಟ್ಟಿದೆ. ಅಲ್ಲದೇ, 75 ಸಾವಿರ ರೂ. ಹಣ ಕೂಡ ಸುಟ್ಟು ಕರಕಲಾಗಿದೆ. ಸ್ವ ಸಹಾಯ ಸಂಘಕ್ಕೆ ಕಟ್ಟಬೇಕಿದ್ದ 75 ರೂ. ಹಣ, ಹಸುವಿನ ಕರು, ಬೆಳ್ಳಿ, ಬಂಗಾರದ ಆಭರಣ ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ.
ಗುಡಿಸಲಿನಲ್ಲೇ ಇದ್ದ ಹಸು ಕೂಡ ಬೆಂಕಿಗೆ ಆಹುತಿಯಾಗಿದೆ. ಗ್ರಾಮದ ರಾಜಮ್ಮ ಎಂಬವರಿಗೆ ಸೇರಿದ ಗುಡಿಸಲು ಇದಾಗಿದೆ. ಅಲ್ಲದೇ ಗುಡಿಸಲಿನಲ್ಲಿ ಇಟ್ಟಿದ್ದ ವಸ್ತುಗಳು, ದವಸ-ಧಾನ್ಯ, ಬಟ್ಟೆ-ಬರೆ ಕೂಡ ಸುಟ್ಟು ಕರಕಲಾಗಿವೆ. ಗುಡಿಸಲಿನಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದ್ದರಿಂದಾಗಿ ಅನುತ ತಪ್ಪಿದೆ. ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸೂಕ್ತ ಪರಿಹಾರಕ್ಕಾಗಿ ಸಂತ್ರಸ್ತ ಕುಟುಂಬಸ್ಥರು ಮನವಿ ಮಾಡುತ್ತಿದ್ದಾರೆ.