ಬೆಂಗಳೂರು: ವ್ಯಾಪಕ ಮಳೆಗೆ ಇಡೀ ಬೆಂಗಳೂರು ತತ್ತರಿಸಿದ್ದು ವಾಹನ ಸವಾರರು ಎಲ್ಲೆಡೆ ಪರದಾಟ ನಡೆಸುವಂತಾಗಿದೆ.
ಮಳೆಯಿಂದಾಗಿ ರಸ್ತೆಯಲ್ಲೆಲ್ಲ ನೀರು ನಿಲ್ಲುವಂತಾಗಿದ್ದು, ಎಲ್ಲೆಡೆ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಕೆ.ಆರ್. ಮಾರ್ಕೆಟ್ ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಲು ವಾಹನ ಸವಾರರು ಪರದಾಟ ನಡೆಸುವಂತಾಗಿದೆ.
ಬೇಸ್ ಮೆಂಟ್ ಪಾರ್ಕಿಂಗ್ ನಲ್ಲಿ ನೂರಕ್ಕೂ ಅಧಿಕ ಬೈಕ್ ಗಳು ಸಿಲುಕಿವೆ. ಕಾರುಗಳು, ವ್ಯಾಪರಸ್ಥರ ತಳ್ಳುಗಾಡಿ ಸೇರಿದಂತೆ ಎಲ್ಲವೂ ಜಲಾವೃತಗೊಂಡಿವೆ. ಕೆ.ಆರ್. ಮಾರ್ಕೆಟ್ ನೀರು ನಿಂತು ಕೊಳಚೆ ಪ್ರದೇಶವಾಗಿದೆ. ಸಾವಿರಕ್ಕೂ ಅಧಿಕ ವಾಹನಗಳನ್ನು ಪಾರ್ಕ್ ಮಾಡಲು ಸಿದ್ಧವಿರುವಂತೆ ಪಾರ್ಕಿಂಗ್ ನಿರ್ಮಿಸಲಾಗಿತ್ತು. ಈಗ ಈ ಪಾರ್ಕಿಂಗ್ ಸ್ಥಳಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.