ಧಾರವಾಡ : ತಾಲೂಕಿನ ಅಮ್ಮಿನಭಾವಿ ಗ್ರಾಮದ ಜೈನ್ ಸಮಾಜದ ಗಡೇಕಾರ ಮನೆತನವು ಪ್ರತಿ ವರ್ಷ ದವನದ ಹುಣ್ಣಿಮೆಯ ಸಂದರ್ಭದಲ್ಲಿ ಅಮ್ಮಿನಭಾವಿ ಯಿಂದ ಎಲ್ಲಮ್ಮನ ಗುಡ್ಡದವರಿಗೆ ಎತ್ತಿನ ಬಂಡೆ ಮುಖಾಂತರ ರೇಣುಕಾಮಾತೆಯ ದರ್ಶನಾಶೀರ್ವಾದಕ್ಕಾಗಿ ಪಾದಯಾತ್ರೆ ಕೈಗೊಳ್ಳುತ್ತಾರೆ. ಈ ಪಾದಯಾತ್ರೆಯಲ್ಲಿ ನೂರಾರು ಜನ ಸದ್ಭಕ್ತರು ಭಾಗವಸುತ್ತಾರೆ. ಇದು ಜೈನ್ ಸಮಾಜದ ಗಡೇಕಾರ ಮನೆತನದಿಂದ ಕಳೆದ ಎಷ್ಟೋ ತೆಲೆಮಾರಿನಿಂದ ನಡೆದುಕೊಂಡು ಬಂದಿದೆ.
ಮುಖ್ಯವಾಗಿ ಇದರ ವೆಚ್ಚದ ಸಲುವಾಗಿ ಅಮ್ಮಿನಬಾವಿ ಗ್ರಾಮದ ಈ ಗಡೇಕರ್ ಮನೆತನವು ಈ ಪಾದಯಾತ್ರೆಯ ವೆಚ್ಚ ಭರಿಸಲು ತಮ್ಮ ಮನೆತನದ ಜಮೀನುಗಳಲ್ಲಿ 4 ಎಕರೆ ಜಮೀನ ಇಳುವರಿಯ ಲಾಭಾಂಶವನ್ನು ಮೀಸಲಿಡುತ್ತಿರುವುದು ಇಲ್ಲಿಯ ವಿಶೇಷ.
ಈ ಪಾದಯಾತ್ರೆಯಲ್ಲಿ ಗಡೇಕಾರ್ ಮನೆತನದ ಎಲ್ಲಾ ಹಿರಿಯರು ಹಾಗೂ ಸದಸ್ಯರು, ಜೈನ್ ಟ್ರಸ್ಟ ಅಧ್ಯಕ್ಷ ಟಿ. ಎಂ. ದೇಸಾಯಿ, ಪಮ್ಮಣ್ಣ ಧಾರವಾಡ, ಚನ್ನಬಸು ಮಾಟರ್, ಮಂಜುನಾಥ್ ಅಂಗಡಿ, ಶಾಂತಿನಾಥ್ ಲೋಕೂರ್, ಈಶ್ವರ್ ಗಡೆಕಾರ್, ಸಮ್ಮೇದ್ ಲೋಕುರ್, ನೇಮಿಚಂದ್ರ ನವಲೂರು, ಶರೀಫ್ ಜಾತಿಗೇರ್, ಈಶ್ವರ್ ಶಿಂತ್ರಿ, ಬಸವರಾಜ್ ಅಣ್ಣಿಗೇರಿ, ಮುಂತಾದವರು ಭಾಗವಹಿಸಿದ್ದರು.