ಪ್ರಧಾನಿ ಮೋದಿ ನೇತೃತ್ವದಲ್ಲಿ ಹೈವೋಲ್ಟೇಜ್ ಮೀಟಿಂಗ್ ನಡೆದಿದೆ. ದೆಹಲಿಯಲ್ಲಿ ಪ್ರಧಾನಿ ಸಾರಥ್ಯದಲ್ಲಿ ಭದ್ರತಾ ಸಂಪುಟ ಸಭೆ ನಡೆದಿದೆ. ಆಪರೇಷನ್ ಸಿಂಧೂರ, ಗಡಿಯಲ್ಲಿನ ಭದ್ರತೆ ಸೇರಿದೆಂತೆ ಪಾಕಿಸ್ತಾನದ ಕದನ ವಿರಾಮ ನಿಯಮ ಪಾಲನೆ ವಿಚಾರವಾಗಿ ಸಮಾಲೋಚಿಸಲಾಗುತ್ತಿದೆ.
ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಪಾಲ್ಗೊಂಡಿದ್ದಾರೆ. ನಿನ್ನೆಯಷ್ಟೇ ಪಂಜಾಬ್ ನ ಅದಂಪುರ ವಾಯುನೆಲೆಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಯೋಧರಿಗೆ ಅಭಿನಂದನೆ ಸಲ್ಲಿಸಿದ್ದರು. ಅಷ್ಟೇ ಅಲ್ಲಾ ಇದೇ ವೇಳೆ ಭಾರತದ ಬಲುದೊಡ್ಡ ವಾಯು ನೆಲೆಯಿಂದಲೇ ಪಾಕಿಗೆ ಕಟ್ಟಕಡೆಯ ವಾರ್ನಿಂಗ್ ರವಾನಿಸಿದ್ದರು. ಸಿಂಧೂರ ರೇಖೆ ದಾಟಿದ್ರೆ ಖೇಲಂ ಖತಂ ಅಂತಾ ಪ್ರಧಾನಿ ಘೋಷಿಸಿದ್ದರು.