ರಾಜ್ಯ ಕಾಂಗ್ರೆಸ್ ನಲ್ಲಿ ಹೊತ್ತಿರುವ ಆಂತರಿಕ ಕಲಹದ ಬೆಂಕಿ ಶಮನಕ್ಕೆ ಈಗ ಪಕ್ಷದ ಹೈಕಮಾಂಡ್ ನಾಯಕರ ರಂಗಪ್ರವೇಶವಾಗಿದೆ.
3 ದಿನಗಳ ಬೆಂಗಳೂರು ಭೇಟಿಗೆ ಆಗಮಿಸ್ತಿರುವ ಉಸ್ತುವಾರಿ, ರಣದೀಪ್ ಸುರ್ಜೇವಾಲಾ, ಅತೃಪ್ತರೊಟ್ಟಿಗೆ ಓನ್ ಟು ಓನ್ ಮೀಟಿಂಗ್ ಮಾಡುತ್ತಿದ್ದಾರೆ. ಈಗಾಗಲೇ ಖುದ್ದು 42ಕ್ಕೂ ಹೆಚ್ಚು ಶಾಸಕರಿಗೆ ಸುರ್ಜೇವಾಲಾ ಕರೆ ಮಾಡಿ ಬುಲಾವ್ ನೀಡಿದ್ದಾರೆ. ಈ ಪೈಕಿ, ಅತೃಪ್ತರು, ನೂತನ ಶಾಸಕರು ಮತ್ತು ಆರೋಪ ಕೇಳಿ ಬರ್ತಿರೋ ನಾಯಕರಿಗೆ ಆಹ್ವಾನ ನೀಡಲಾಗಿದೆ. ಇನ್ನು ಭಿನ್ನರಾಗ ಹಾಡಿರುವ ಬಿಆರ್ ಪಾಟೀಲ್ ಮತ್ತು ರಾಜು ಕಾಗೆ ಜೊತೆಗಿಂದು ಮಧ್ಯಾಹ್ನ ಮೀಟಿಂಗ್ ಫಿಕ್ಸ್ ಆಗಿದೆ.
ಇದರ ನಡುವೆ, ಅತೃಪ್ತರಿಗೆ ಖಡಕ್ ವಾರ್ನಿಂಗ್ ನೀಡುವ ಸಾಧ್ಯತೆಗಳಿದ್ದು, 6 ಪ್ರಶ್ನೆಗಳನ್ನು ಮಾಡಲು ಪ್ಲ್ಯಾನ್ ಮಾಡಲಾಗಿದೆ. ಈ ಪೈಕಿ, ಮೊದಲಿನೆಯದಾಗಿ ನಿಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಐದು ಗ್ಯಾರಂಟಿಗಳ ಅನುಷ್ಠಾ ಹೇಗೆ ಸಾಗಿದೆ. ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಹೇಗೆ ಸಾಗಿದೆ. ರಾಜಕೀಯ, ಸಾಮಾಜಿಕ ಸಮಸ್ಯೆಗಳಾದರೂ ಏನಿವೆ. ಅವುಗಳ್ನು ಹೇಗೆ ಕಾಂಗ್ರೆಸ್ ಮತ್ತು ಸರ್ಕಾರ ಹೇಗೆ ಪರಿಹರಿಬೇಕು ಅಂತಾ ನೀವು ಬಯಸುತ್ತೀರಿ.
ನಾಲ್ಕನೆಯದಾಗಿ ನಿಮ್ಮ ಕ್ಷೇತ್ರದಲ್ಲಿ ತುರ್ತಾಗಿ ಆಗಬೇಕಿರುವ ಕೆಲಸಗಳು ಮತ್ತು, ಬಾಕಿ ಉಳಿದಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಿ. ಐದನೆಯಾದಾಗಿ, ನಿಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ನ ವಿವಿಧ ವಿಂಗ್ ಗಳು ಹೇಗೆ ಕಾರ್ಯ ನಿರ್ಹಿಸುತ್ತಿವೆ.
ಯೂತ್ ಕಾಂಗ್ರೆಸ್ ಸಕ್ರಿಯವಾಗಿದೆಯಾ, ಒಬಿಸಿ, ಅಲ್ಪಸಂಖ್ಯಾತ ನಿಗಮಗಳು ಜನ ಪರ ಕಾರ್ಯ ಮಾಡುತ್ತಿವೆಯಾ? ಅಂತಲೂ ಸುರ್ಜೇವಾಲ ಮಾಹಿತಿ ಕಲೆಹಾಕಲಿದ್ದಾರೆ. ಉಳಿದಂತೆ, ನಿಗಮ ಮಂಡಳಿಗೆ ನೇಮಿಸುವುದಾದ್ರೆ, ನಿಮ್ಮ ಕ್ಷೇತ್ರದಲ್ಲಿ ಯಾರು ಅರ್ಹರಿದ್ದಾರೆ.
ಅವರಿಂದ ಪಕ್ಷಕ್ಕಾಗೋ ಲಾಭವೇನು ಅನ್ನೋದರ ಬಗ್ಗೆಯೂ ಮಾಹಿತಿ ಕಲೆಹಾಕಲಾಗಲಿದೆ. ಈ ಮೂಲಕ ಭಿನ್ನರಿಗೆ ಹೊಸ ಟಾಸ್ಕ್ ನೀಡಿ ಅವರನ್ನು ಪಕ್ಷದ ಚಟುವಟಿಕೆಗಳಲ್ಲಿ ಬ್ಯುಸಿ ಮಾಡಿ, ಭಿನ್ನರಾಗದಿಂದ ಮುಕ್ತಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲಾ ಈ ಸಭೆಯಲ್ಲಿ ಪ್ರತಿ ನಾಯಕರಿಗೂ ತಲಾ 10 ನಿಮಿಷಗಳ ವಿವರಣೆ ನೀಡಲು ಅವಕಾಶ ಮಾಡಿಕೊಡಲಾಗುತ್ತಿದೆ.