ಮುಂಗಾರು ಮಹಾ ಮಳೆಯ ಪರಿಣಾಮ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಕಲೇಶಪುರ ತಾಲೂಕಿನ ದೋಣಿಗಾಲ್ ಸಮೀಪದ ಏಲಕ್ಕಿ ಮಂಡಳಿ, ಆನೆ ಮಹಲ್ ಬಳಿ ದೊಡ್ಡ ಪ್ರಮಾಣದ ಗುಡ್ಡ ಕುಸಿತವಾಗಿದೆ.
ಹೀಗಾಗಿ ಬೆಂಗಳೂರು-ಮಂಗಳೂರು ಸಂಚಾರಕ್ಕೆ ಅಡ್ಡಿಯಾಗಿದೆ. ಇನ್ನೊಂದೆಡೆ, ಹೆಗ್ಗದ್ದೆ ಬಳಿ ಮುನ್ನೂರು ಮೀಟರ್ ಗೂ ಹೆಚ್ಚು ಭೂಮಿ ಕುಸಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಷ್ಟೇ ಅಲ್ಲಾ ಶೃಂಗೇರಿ ಸಮೀಪದ ಆನೆಗುಂದ, ಸಂಕ್ಲಾಪುರ, ನೆಮ್ಮಾರು ಬಳಿಯೂ ಭೂ ಕುಸಿತವಾಗ್ತಿರೋದು ಆತಂಕ ಹೆಚ್ಚಿಸಿದೆ.