ಯಾದಗಿರಿ: ರಾಜ್ಯದ 17 ಜಲಾಶಯಗಳಿಗೆ ಭದ್ರತೆ ಕೈಗೊಳ್ಳಲು ಸರ್ಕಾರ ಆದೇಶ ನೀಡಿರುವ ಹಿನ್ನಲೆಯಲ್ಲಿ ನಾರಾಯಣಪುರದ ಬಸವ ಸಾಗರ ಜಲಾಶಯಕ್ಕೆ ಭಾರೀ ಹೈ ಸೆಕ್ಯೂರಿಟಿ ನೀಡಲಾಗಿದೆ.
ಮೂರು ಜಿಲ್ಲೆಯ ಗಡಿ ಹಂಚಿಕೊಂಡಿರುವ ನಾರಾಯಣಪುರ ಡ್ಯಾಂನ ನಾಲ್ಕು ಗೇಟ್ ಗಳಿಗೂ ರಾಯಚೂರು, ವಿಜಯಪುರ, ಯಾದಗಿರಿ ಪೊಲೀಸರಿಂದ ಭದ್ರತೆ ನೀಡಲಾಗಿದೆ. ಒಂದೊಂದು ಜಿಲ್ಲೆಯಿಂದ ಒಂದೊಂದು ಗೇಟ್ ಗೆ ಹತ್ತಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ.
ಜಲಾಶಯಕ್ಕೆ ಬಂದು ಹೋಗುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟು ಪ್ರತಿಯೊಬ್ಬರನ್ನು ಚೆಕ್ ಮಾಡಿ ಒಳಗೆ ಬಿಡುತ್ತಿದ್ದಾರೆ. ಮೂರು ಜಿಲ್ಲೆಯ 40 ಅಧಿಕ ಪೊಲೀಸರನ್ನ ನಿಯೋಜಿಸಿ ಡ್ಯಾಂಗೆ ಭದ್ರತೆ ನೀಡಲಾಗಿದೆ.