ಬೆಂಗಳೂರು: ಗ್ರೆಟರ್ ಬೆಂಗಳೂರಿಗೆ ರಾಜ್ಯಪಾಲರು ಅನುಮತಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ. ಸೋಮಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಎಂ ಡಿ.ಕೆ ಶಿವಕುಮಾರ್ ಈ ಕಾಯ್ದೆಯನ್ನು ತರಲು ಹೊರಟಿರುವ ಬಾಸ್. ಅವರೇನೋ ಮಾಡ್ತಿದ್ದಾರೆ ಮಾಡಲಿ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಆಗ ಎಲ್ಲವೂ ಬದಲಾವಣೆ ಆಗಲಿದೆ. ಈ ಹಿಂದೆ ಬಿಬಿಎಂಪಿ ಚುನಾವಣೆ ಹೇಗೆ ನಡೆಯತ್ತೋ? ಹಾಗೆ ನಡೆಸೋಣ ಎಂದಿದ್ದಾರೆ.
ಇಲ್ಲದಿರುವುದನ್ನು ಇದೆ ಅಂತಾ ತೋರಿಸಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಗ್ರೇಟರ್ ಬೆಂಗಳೂರು ಕಾಯ್ದೆ ಮೂಲಕ ಬಿಬಿಎಂಪಿ ಚುನಾವಣೆ ಇನ್ನಷ್ಟು ವಿಳಂಬ ಮಾಡಲು ಹೊರಟಿದ್ದಾರೆ. ಇವರು ಬಂದ ನಂತರ ಕನಿಷ್ಟ ರಸ್ತೆ ಗುಂಡಿ ಮುಚ್ಚಿಲ್ಲ, ಅಭಿವೃದ್ಧಿ ಇಲ್ವೇ ಇಲ್ಲ. ಇದೆಲ್ಲ ಡಿಕೆಶಿ ನಿರ್ಧಾರಗಳು. ಅವರೇ ಈ ಕಾಯ್ದೆ ತರಲು ಹೊರಟಿರುವ ಬಾಸ್ ಎಂದು ವ್ಯಂಗ್ಯವಾಡಿದ್ದಾರೆ.
ಮುಂದಿನ ಸಲ ಕಾಂಗ್ರೆಸ್ ನವರು ಗೆಲ್ಲುವುದಿಲ್ಲ. ಇವರ ನಂತರ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನಾವು ಬಂದ ನಂತರ ಈಗಿರುವ ಬಿಬಿಎಂಪಿಗೆ ಚುನಾವಣೆ ನಡೆಸುತ್ತೇವೆ ಎಂದು ಹೇಳುವುದರ ಮೂಲಕ ಗ್ರೇಟರ್ ಕಾಯ್ದೆ ಹಿಂಪಡೆಯುತ್ತೇವೆ ಎಂಬ ಸುಳಿವು ನೀಡಿದ್ದಾರೆ.