ಅನುದಾನಕ್ಕಾಗಿ ನ್ಯಾಯಾಂಗ ಹೋರಾಟ ಮಾಡುವೆ ಎಂದು ಕೋಲಾರದ ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅನುದಾನ ಹಂಚಿಕೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ರಾಜ್ಯದ ಎಲ್ಲಾ ಶಾಸಕರನ್ನು ಒಂದೇ ಸಮನಾಗಿ ನೋಡುತ್ತಿಲ್ಲ. ಕೋಲಾರಕ್ಕೆ ಒಂದು ಅನುದಾನ, ಮುಳಬಾಗಿಲಿಗೆ ಮತ್ತೊಂದು ಅನುದಾನ ನೀಡುತ್ತಿದ್ದಾರೆ. ಮೊದಲನೇ ಬಾರಿಗೆ ಶಾಸಕನಾಗಿ, ಯಾಕಪ್ಪಾ ಆಯ್ಕೆಯಾದೆ ಅನಿಸುತ್ತಿದೆ.
ಮುಳಬಾಗಿಲು ತಾಲೂಕು ಮೀಸಲು ಕ್ಷೇತ್ರವಾದರೂ ಅನುದಾನ ನೀಡುತ್ತಿಲ್ಲ. ಅನುದಾನಕ್ಕಾಗಿ ಮುಂದೆ ನ್ಯಾಯಾಂಗ ಹೋರಾಟ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಮತ್ತ ರಾಜ್ಯ ಸರ್ಕಾರಕ್ಕೆ ಸಮೃದ್ದಿ ಮಂಜುನಾಥ್ ಎಚ್ಚರಿಕೆಯನ್ನು ನೀಡಿದ್ದಾರೆ.