ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ 242 ಜನರ ಪೈಕಿ 241 ಜನ ಸುಟ್ಟು ಕರಕಲಾಗಿದ್ದಾರೆ. ಆದರೆ, ಪವಾಡ ಸದೃಶ ಎನ್ನುವಂತೆ ವ್ಯಕ್ತಿಯೋರ್ವ ಬದುಕುಳಿದ್ದಾರೆ. ತಾವು ಬದುಕಿ ಬಂದ ಬಗೆಯನ್ನು ಅವರು ಸುದ್ದಿಗಾರರೊಂದಿಗೆ ಹಂಚಿಕೊಂಡಿದ್ದಾರೆ.
40 ವರ್ಷದ ವಿಶ್ವಾಸ್ ಕುಮಾರ್ ರಮೇಶ್ (Vishwash Kumar Ramesh) ಪವಾಡ ಸದೃಶ ರೀತಿಯಲ್ಲಿ ಪಾರಾದ ವ್ಯಕ್ತಿ. ವಿಮಾನ ಟೇಕಾಫ್ ಆದ 30 ಸೆಕೆಂಡ್ಗಳ ನಂತರ ದೊಡ್ಡ ಶಬ್ಧ ಕೇಳಿ ಬಂತು ಆನಂತರ ಪತನವಾಯಿತು ಎಂದಿದ್ದಾರೆ.
ತುರ್ತು ನಿರ್ಗಮನ ಡೋರ್ ಬಳಿಯ 11A ಸೀಟಿನಲ್ಲಿ ಕುಳಿತುಕೊಂಡಿದ್ದರು. ಪತನಗೊಳ್ಳುವ ಕೊನೆ ಕ್ಷಣದಲ್ಲಿ ವಿಮಾನದಿಂದ ಹಾರಿದ್ದರಿಂದ ಪಾರಾಗಿದ್ದಾರೆ. ಘಟನೆಯಲ್ಲಿ ವಿಶ್ವಾಸ್ ವಿಶ್ವಾಸ್ ಅವರ ಎದೆ , ಕಣ್ಣು, ಪಾದಗಳಿಗೆ ಹಾನಿಯಾಗಿವೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಶ್ವಾಸ್ ಸ್ಥಳದಲ್ಲಿ ನಡೆದುಕೊಂಡು ಬಂದು ಆಂಬುಲೆನ್ಸ್ ಹತ್ತುವ ವಿಡಿಯೋ ಕೂಡ ವೈರಲ್ ಆಗಿವೆ.
ಬ್ರಿಟಿಷ್ ಪ್ರಜೆಯಾಗಿರುವ ವಿಶ್ವಾಸ್ ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದರು. ಆದರೆ, ಅವರು ಸಹೋದರ ಅಜಯ್ ಕುಮಾರ್ ರಮೇಶ್ (45) ಜೊತೆ ಯುಕೆಗೆ ತೆರಳುತ್ತಿದ್ದರು. ಆದರೆ, ಅವರ ಸಹೋದರ ಬದುಕುಳಿದಿಲ್ಲ ಎನ್ನಲಾಗುತ್ತಿದ್ದು, ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ.