ಮಂಡ್ಯ : ಕೇಂದ್ರ ಸಚಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕೈಯಲ್ಲಿ ಅಸ್ತ್ರ ಇಟ್ಟುಕೊಂಡು ಹುಡುಕುತ್ತಾ ಇದ್ದೇನಿ ಅಂತಾರೆ. ಅವರು ತಿಂಕಿಂಗ್ ಸ್ವಾಮಿ. ನಮ್ಮ ವ್ಯಾಪ್ತಿ ಒಳಗೆ 2 ಸಾವಿರ ಉದ್ಯೋಗ ಸೃಷ್ಟಿಯಾಗಿವೆ. ಡಿ ಮಾರ್ಟ್, ಜೋಡೋ, ಮಾಲ್ ಗಳು, ಕಂಪನಿಗಳು ಬಂದಿವೆ. ಎಷ್ಟೋ ಹೋಟೆಲ್ ಗಳು ಬಂದಿದೆ. ಅಮ್ಯೂಸ್ಮೆಂಟ್ ಪಾರ್ಕ್ ಬಂದರೆ ಉದ್ಯೋಗ ಸೃಷ್ಟಿಯಾಗತ್ತೆ. ಜವಳಿ ಪಾರ್ಕ್ ನಿರ್ಮಾಣ ಆಗುತ್ತೆ. ಇದನ್ನ ಬಿಟ್ಟು ಇನ್ನು ತಿಂಕಿಂಗ್ ಮಾಡ್ತಾನೆ ಇದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರು ಎನ್ ಕಿತ್ ಗುಡ್ಡೆ ಹಾಕಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸರ್ಕಲ್ ಗೆ ಬರಲಿ ಏನೇನು ಅಂತ ತೋರಿಸ್ತೀವಿ. ಎಲ್ಲೆಲ್ಲಿ ಗುಡ್ಡೆ ಹಾಕಬೇಕು ಹಾಕಿದ್ದೇವೆ. ಎಣಿಸಿಕೊಂಡು ಹೋಗಲಿ. 2028ಕ್ಕೆ ಕಾಂಗ್ರೆಸ್ ಸರ್ಕಾರ ಮತ್ತೆ ಬಂದೇ ಬರುತ್ತದೆ. ನಾವು ಜನಪರ ಇದ್ದೇವೆ ಎಂದಿದ್ದಾರೆ.