ರಾಮನಗರ: ಮಾಗಡಿಯ ಒಂದೇ ಕುಟುಂಬದ ನಾಲ್ವರು ದುರ್ಮರಣಕ್ಕೀಡಾಗಿದ್ದು, ಸಾಗರೋಪಾದಿಯಲ್ಲಿ ಜನರ ದಂಡು ಹರಿದು ಬಂದಿದೆ.ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿಯ ಮತ್ತೀಕೆರೆ ಗ್ರಾಮದ ಸೀಬೇಗೌಡ ಹಾಗೂ ಪತ್ನಿ, ಮಕ್ಕಳು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಜನ ಸಾಗರವೇ ಹರಿದು ಬಂದಿದೆ. ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಎಲ್ಲ ವ್ಯವಸ್ಥೆ ಮಾಡಿದ್ದಾರೆ.
ಅಪಘಾತದಲ್ಲಿ ಸಾವನ್ನಪ್ಪಿದ ಸೀಬೇಗೌಡ ಅವರು ಶಾಸಕ ಆಪ್ತರಲ್ಲಿ ಒಬ್ಬರಾಗಿದ್ದರು. ಸಾವಿರಾರು ಜನರು ಅಂತಿಮ ದರ್ಶನ ಪಡೆದಿದ್ದಾರೆ. ಸೀಬೇಗೌಡ, ಪತ್ನಿ ಶೋಭಾ, ಮಕ್ಕಳಾದ ಭಾನುಕಿರಣ್ ಗೌಡ, ವರ್ಣಿತ ಸಾವನ್ನಪ್ಪಿದ್ದು, ಎಲ್ಲರ ಅಂತ್ಯಕ್ರಿಯೆ ನಡೆದಿದೆ.