ಬೆಂಗಳೂರು: ಕಾರು ಹಾಗೂ ಬೈಕ್ ಅಪಘಾದಲ್ಲಿ 24 ವರ್ಷದ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಏರೋನಾಟಿಕಲ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಯುವತಿ ಸಾವನ್ನಪ್ಪಿದ್ದಾರೆ. ಬಾಗಲೂರಿನ ಕೆಐಎಡಿಬಿ ಸರ್ಕಲ್ ನಲ್ಲಿ ಫಾರ್ಚ್ಯುನರ್ ಕಾರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಸವಾರೆ ನಂದಿನಿ ತಲೆಗೆ ತೀವ್ರ ಪೆಟ್ಟಾಗಿತ್ತು. ಈ ವೇಳೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸು ಮಾರ್ಗ ಮಧ್ಯೆಯೇ ಪ್ರಾಣತೆತ್ತಿದ್ದಾರೆ. ನೆಲಮಂಗಲದ ಹೊಸ್ಕೂರಿನವರಾದ ನಂದಿನಿ, ಬಾಗಲೂರಿನ ಪಿಜಿಯಲ್ ವಾಸವಾಗಿದ್ದರು.
ನಿನ್ನೆ ಸಂಜೆ 6.30ರ ಹೊತ್ತಿಗೆ ಕೆಲಸದಿಂದ ವಾಪಸ್ ಆಗುವಾಗ ಬಾಗಲೂರಿನ ಕೆಐಎಡಿಬಿ ಸರ್ಕಲ್ ಬಳಿ ಈ ಅಪಘಾತ ಸಂಭವಿಸಿದೆ. ತೀವ್ರ ರಕ್ತ ಸ್ರಾವದ ಪರಿಣಾಮ ನಂದಿನಿ ಕೊನೆಯುಸಿರೆಳೆದಿದ್ದಾರೆ. ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಚಿಕ್ಕಜಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.