ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ದಂಪತಿ ದೆಹಲಿಯ ತಮ್ಮ ಆಧ್ಯಾತ್ಮ ಗುರುವಿನ ಸನ್ನಿಧಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಬಹು ವರ್ಷಗಳಿಂದ ತಮ್ಮ ಆಧ್ಯಾತ್ಮ ಗುರು ಪ್ರೇಮಾನಂದ್ ಜಿ ಮಹಾರಾಜ್ ರನ್ನು ಅನುಸರಿಸುತ್ತಿರುವ ವಿರಾಟ್ ಇಂದು ದಿಢೀರ್ ಅವರ ಆಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಪತ್ನಿ ಅನುಷ್ಕಾ ಜೊತೆ ಆಗಮಿಸಿದ ವಿರಾಟ್, ಪ್ರೇಮಾನಂದ್ ಗುರೂಜಿ ಜೊತೆ ಕೆಲ ಕಾಲ ಚರ್ಚಿಸಿದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುವ ಮುನ್ನವೂ ಕೊಹ್ಲಿ ದಂಪತಿ ಮಕ್ಕಳಾದಿಯಾಗಿ ಆಶ್ರಮಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಇದೀಗ ಟೆಸ್ಟ್ ಕ್ರಿಕೆಟ್ ಗೆ ವಿದಾಯದ ಬೆನ್ನಲ್ಲೇ ವಿರಾಟ್ ಮತ್ತು ಅನುಷ್ಕಾ ಬೃಂದಾವನದಲ್ಲಿ ಕಾಣಿಸಿಕೊಂಡಿದ್ದು ಗುರುವಿನ ಸಲಹೆ ಪಡೆದಿದ್ದಾರೆ. ಆದ್ರೆ ಈ ಬಾರಿ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಜೊತೆಯಲ್ಲಿ ಇರಲಿಲ್ಲ.