ರಾಜ್ಯದಲ್ಲಿ ಮರು ಜಾತಿಗಣತಿ ವಿಚಾರವನ್ನು ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್ ಸ್ವಾಗತಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿರ್ಧಾರವನ್ನು ಎಲ್ಲರೂ ಸ್ವಾಗತಿಸುತ್ತೇವೆ. ಎಲ್ಲಾ ಜನಾಂಗದವರಲ್ಲೂ ಈ ಗೊಂದಲ ಇತ್ತು. ನಮ್ಮ ಜನಾಂಗದವರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿಲ್ಲ ಎಂಬ ಮಾಹಿತಿ ಇತ್ತು. ಇತ್ತೀಚೆಗೆ ಒಳ ಮೀಸಲಾತಿ ಕುರಿತು ಪರಿಶಿಷ್ಟ ಜಾತಿಯ ಸಮೀಕ್ಷೆ ನಡೆಯಿತು.
ಅದರಲ್ಲಿ ದಲಿತ ಸಂಘಟನೆಗಳು ಮನೆ ಮನೆ ಬಾಗಿಲಿಗೆ ಹೋಗಿ ಜಾತಿ ಹೆಸರು ಬರೆಸುವಂತೆ ಪ್ರಚಾರ ಮಾಡಿದ್ದರು. ಇದು ಜನರಲ್ಲಿ ಒಳ್ಳೆಯ ಅರಿವು ಮೂಡಿಸಿತು. ಜನರೂ ಕೂಡ ಸ್ಪಂದಿಸಿ ಅವರ ಒಳ ಪಂಗಡದ ಹೆಸರನ್ನು ಬರೆಯಿಸಿದ್ದಾರೆ. ಇದೊಂದು ರೀತಿ ಎಲ್ಲರೂ ಜಾಗೃತರಾಗಿ ತಮ್ಮ ಜಾತಿಯನ್ನು ಹೇಳಿಕೊಳ್ಳುವುದಕ್ಕೆ ಅವಕಾಶ. ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ ಎಂದಿದ್ದಾರೆ.