ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷಗಿರಿ ಬದಲಾವಣೆಯ ಪರ್ವ ನಡೆದಿದೆ. ಹಲವಾರು ವಿರೋಧಗಳ ಮದ್ಯೆಯೂ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರ ನೇಮಕವಾಗಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿನ ಆಯ್ಕೆ ಅಪೂರ್ಣಗೊಂಡಿದ್ದು, ಸದ್ಯದಲ್ಲೇ ಆ ಜಿಲ್ಲೆಗಳಲ್ಲೂ ಅಧ್ಯಕ್ಷರ ಆಯ್ಕೆ ನಡೆಯುವ ಸಾಧ್ಯತೆ ಇದೆ.
ರಾಜ್ಯ ರಾಜ್ಯಾದ್ಯಕ್ಷರ ಆಯ್ಕೆಗೆ ಕಸರತ್ತು ನಡೆದ ಬೆನ್ನಲ್ಲೇ ಜಿಲ್ಲಾಧ್ಯಕ್ಷರ ಬದಲಾವಣೆಗಳು ಕೂಡ ನಡೆದವು. ಜಿಲ್ಲಾಧ್ಯಕ್ಷರ ಆಯ್ಕೆಯ ನಂತರ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಒಂದೆಡೆ ಹಾಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅದ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಉತ್ಸುಕತೆ ತೋರಿಸುತ್ತಿದ್ದರೆ, ಯತ್ನಾಳ್ ಮತ್ತು ತಂಡ ಸೆಡ್ಡು ಹೊಡೆದಿದೆ. ಹೀಗಾಗಿ ಯಾರಿಗೆ ಅಧ್ಯಕ್ಷ ಸ್ಥಾನ ಸಿಗಲಿದೆ ಎಂಬುವುದು ಕೂಡ ಕುತೂಹಲ ಮೂಡಿಸಿದೆ. ರೆಬೆಲ್ ಟೀಮ್ ಈಗಾಗಲೇ ರಾಮುಲು ಅವರಿಗೂ ಆಫರ್ ನೀಡಿ ಸೆಳೆಯುವ ಕೆಲಸ ಮಾಡುತ್ತಿದೆ. ಹೀಗೆ ಬಿಜೆಪಿಯಲ್ಲೇ ಅಧ್ಯಕ್ಷಗಿರಿಗೆ ಒಳ ಸಂಚುಗಳು ನಡೆಯುತ್ತಿವೆ. ಇದರ ಮಧ್ಯೆ ಈಗ ಜಿಲ್ಲಾಧ್ಯಕ್ಷರ ಆಯ್ಕೆ ಅಂತಿಮಗೊಳಿಸಲಾಗುತ್ತಿದೆ.
28 ಜಿಲ್ಲಾ ಕೇಂದ್ರಗಳಿಗೆ ರಾಜ್ಯ ಬಿಜೆಪಿ ಘಟಕದ ಚುನಾವಣಾಧಿಕಾರಿಯಾಗಿದ್ದ ಕ್ಯಾಪ್ಟನ್ ಗಣೇಶ್ ಕಾರ್ತಿಕ್ ಅಧ್ಯಕ್ಷರ ಆಯ್ಕೆಯನ್ನು ಅಂತಿಮಗೊಳಿಸಿ ಬಹಿರಂಗಗೊಳಿಸಿದ್ದಾರೆ.
ಯಾರು, ಯಾವ ಜಿಲ್ಲೆಯ ಅಧ್ಯಕ್ಷರು?
- ಮೈಸೂರು ನಗರ – ಎಲ್. ನಾಗೇಂದ್ರ.
- ಚಾಮರಾಜನಗರ – ಸಿ.ಎಸ್. ನಿರಂಜನ್ಕುಮಾರ್.
- ದಕ್ಷಿಣ ಕನ್ನಡ – ಸತೀಶ್ ಕುಂಪಲ.
- ಚಿಕ್ಕಮಗಳೂರು – ದೇವರಾಜ ಶೆಟ್ಟಿ.
- ಶಿವಮೊಗ್ಗ – ಎನ್.ಕೆ. ಜಗದೀಶ್.
- ಉತ್ತರ ಕನ್ನಡ – ನಾರಾಯಣ ಶ್ರೀನಿವಾಸ ಹೆಗಡೆ.
- ಹುಬ್ಬಳ್ಳಿ-ಧಾರವಾಡ – ತಿಪ್ಪಣ್ಣ ಮಜ್ಜಗಿ.
- ಧಾರವಾಡ ಗ್ರಾಮಾಂತರ – ನಿಂಗಪ್ಪ ಡಿ.ಸುತಗಟ್ಟಿ.
- ಬೆಳಗಾವಿ ನಗರ – ಗೀತಾ ಸುತಾರ್.
- ಬೆಳಗಾವಿ ಗ್ರಾಮಾಂತರ – ಸುಭಾಷ್ ದುಂಡಪ್ಪ ಪಾಟೀಲ್.
- ಚಿಕ್ಕೋಡಿ – ಸತೀಶ್ ಅಪ್ಪಾಜಿಗೋಳ್.
- ಬೀದರ್ – ಸೋಮನಾಥ್ ಪಾಟೀಲ್.
- ಕಲ್ಬುರ್ಗಿ ನಗರ – ಚಂದ್ರಕಾಂತ್.ಬಿ.ಪಾಟೀಲ್.
- ಕಲ್ಬುರ್ಗಿ ಗ್ರಾಮಾಂತರ – ಅಶೋಕ್ ಬಗಲಿ.
- ಯಾದಗಿರಿ – ಬಸವರಾಜಪ್ಪ ಗೌಡ.ವಿ.
- ಕೊಪ್ಪಳ – ಬಸವರಾಜ ದಢೇಸೂಗೂರು.
- ಬಳ್ಳಾರಿ – ಅನಿಲ್ಕುಮಾರ್ ಮೋಕಾ.
- ವಿಜಯನಗರ – ಸಂಜೀವ್ ರೆಡ್ಡಿ.
- ಚಿಕ್ಕಬಳ್ಳಾಪುರ – ಬಿ. ಸಂದೀಪ್.
- ಕೋಲಾರ – ಓಂಶಕ್ತಿ ಚಲಪತಿ.
- ಬೆಂಗಳೂರು ಉತ್ತರ – ಎಸ್. ಹರೀಶ್.
- ಬೆಂಗಳೂರು ಕೇಂದ್ರ – ಸಪ್ತಗಿರಿಗೌಡ
- ಬೆಂಗಳೂರು ದಕ್ಷಿಣ – ಸಿ.ಕೆ. ರಾಮಮೂರ್ತಿ.