ನಾಳೆ ಡಿಸಿಎಂ ಡಿಕೆಶಿವಕುಮಾರ್ ಹುಟ್ಟಹಬ್ಬದ ಹಿನ್ನೆಲೆ ಹುಟ್ಟುಹಬ್ಬದ ಆಚರಣೆ ಮಾಡದಂತ ತಮ್ಮ ಕಾರ್ಯಕರ್ತರಿಗೆ ಅಭಿಮಾನಿಗಳಿಗೆ ಡಿಕೆಶಿ ಮನವಿ ಮಾಡಿದ್ದಾರೆ.

ಭಯೋತ್ಪಾದನೆ ವಿರುದ್ದ ಯೋಧರು ಪ್ರಾಣಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಹೀಗಾಗಿ ನಾಳೆ ಯಾರೂ ನನ್ನ ಜನ್ಮದಿನ ಆಚರಿಸಬಾರದು. ನಾನು ನಾಳೆ ಬೆಂಗಳೂರಲ್ಲಿ ಇರೋದಿಲ್ಲ, ಹೀಗಾಗಿ ನನ್ನನ್ನ ಭೇಟಿ ಮಾಡೋದಕ್ಕೆ ಯಾರೂ ಕೂಡ ನಿವಾಸಕ್ಕೆ ಬರಬೇಡಿ, ಜನ್ಮದಿನ ಪ್ರಯುಕ್ತ ಯಾರೂ ಸಹ ಫ್ಲೆಕ್ಸ್, ಬ್ಯಾನರ್ ಹಾಕಬೇಡಿ, ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೆ, ನೀವು ಇರುವ ಜಾಗದಿಂದಲೇ ನನಗೆ ಶುಭ ಹಾರೈಸಿ ಎಂದು ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರದ ಮೂಲಕ ಮನವಿಯನ್ನು ಮಾಡಿದ್ದಾರೆ.