ಒಂದಲ್ಲಾ ಎರಡಲ್ಲಾ 241 ಮಂದಿಯ ಉಸಿರು ನಿಲ್ಲಿಸಿದ ಭೀಕರ ದುರಂತಕ್ಕೆ ಕಾರಣವಾಗಿದ್ದಾದರು ಏನು? ಅಹಮದಾಬಾದ್ ನ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಗೆ ವಿಮಾನ ಅಪ್ಪಳಿಸುವಂತಾಗಿದ್ದು ಯಾಕೆ. ಜಗತ್ತಿನ ಅತ್ಯಂತ ಸುರಕ್ಷಿತ ವಿಮಾನ ಅಂತಲೇ ಕರೆಯಿಸಿಕೊಳ್ಳುವ ಆಗಸದ ಅರಮನೆ ಖ್ಯಾತಿಯ ಬೋಯಿಂಗ್ ಡ್ರೀಮ್ ಲೈನರ್ ನಲ್ಲಿ ಆಗಿದ್ದೇನು? ನಿಜಕ್ಕೂ ಇವತ್ತಿಗೆ ಅಪಘಾತಕ್ಕೆ ಕಾರಣವಾದ ಅಂಶ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಕಾಡ್ತಿದೆ. ಆದ್ರೆ, ದುರಂತದ ಅಸಲಿ ಕಹಾನಿ ಆ ಬ್ಲ್ಯಾಕ್ ಬಾಕ್ಸ್ ನಲ್ಲಿ ಅಡಗಿದೆ.
ಹಾಸ್ಟೆಲ್ ಮೇಲ್ಛಾವಣಿಯಲ್ಲಿತ್ತು ವಿಮಾನದ ಬ್ಲ್ಯಾಕ್ ಬಾಕ್ಸ್
ಬ್ಲ್ಯಾಕ್ ಬಾಕ್ಸ್ ಡಾಟಾ ರಿಟ್ರೀವ್ ಪ್ರಕ್ರಿಯೆ ಹೇಗಿರಲಿದೆ
ಅಪಘಾತಕ್ಕೆ ತುತ್ತಾದ ವಿಮಾನದ ಬ್ಲ್ಯಾಕ್ ಬಾಕ್ಸ್ ಗಾಗಿ ನಿನ್ನೆ ಇಡೀ ದಿನ ಅಧಿಕಾರಿಗಳು ನಿರಂತರ ಶೋಧ ನಡೆಸಿದ್ದಾರೆ. ಅಂತಿಮವಾಗಿ ಸಂಜೆ ವೇಳೆಗೆ ಬಿಜೆ ಹಾಸ್ಟೆಲ್ ನ ಮೇಲ್ಛಾವಣಿಯ ಅವಶೇಷಗಳಡಿ ಈ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಸಹಜವಾಗಿ ಪ್ರತಿ ವಿಮಾನದಲ್ಲೂ ಎರಡೆರೆಡು ಬ್ಲ್ಯಾಕ್ ಬಾಕ್ಸ್ ಗಳಿರ್ತವೆ. ಒಂದಕ್ಕೆ ಒಂದು ಬ್ಯಾಕ್ ಅಪ್ ರೀತಿಯಲ್ಲಿ ಈ ಬ್ಲ್ಯಾಕ್ ಬಾಕ್ಸ್ ಗಳನ್ನು ಅಳವಡಿಸಲಾಗಿರುತ್ತೆ. ಇನ್ನು ಈ ಕಪ್ಪು ಪೆಟ್ಟಿಗೆಯಲ್ಲಿ ಅಪಘಾತಕ್ಕೂ ಮುನ್ನ ಕಾಕ್ ಪಿಟ್ ನಲ್ಲಿ ನಡೆದ ಸಂಭಾಷಣೆ. ಅಂತಿಮವಾಗಿ ಪೈಲೆಟ್ ನೀಡಲೆತ್ನಿಸಿದ್ದ ಮಾಹಿತಿ ಅಡಗಿರುತ್ತೆ. ಜೊತೆಗೆ, ವಿಮಾನ ಯಾವ ಮಟ್ಟದಲ್ಲ ಹಾರಾಟ ನಡೆಸುತ್ತಿತ್ತು. ವೇಗವೆಷ್ಟಿತ್ತು? ಯಾವ ಮಾರ್ಗದಲ್ಲಿ ವಿಮಾನ ಸಂಚಾರ ನಡೆಸಿತ್ತು? ಯಾವ ನಕ್ಷೆ ಆಧರಿಸಿ ಹಾರಾಟ ಮಾಡಲಾಗ್ತಿತ್ತು ಅನ್ನೋ ಸಮಸ್ತ ವಿವರವೂ ಇದರಲ್ಲಿರಲಿದೆ. ಇನ್ನು ವಿಮಾನದೊಳಗಿನ ಸಿಸಿ ಕ್ಯಾಮರಾಗಳಲ್ಲಿ ದಾಖಲಾದ ಅಂತಿಮ ದೃಶ್ಯಗಳು ಮುದ್ರಿತವಾಗಿರುವ ಡಿವಿಆರ್ ಕೂಡಾ ಪತ್ತೆಯಾಗಿದೆ. ಹಾಗಂತಾ ಕಪ್ಪು ಪೆಟ್ಟಿಗೆ ಅಂತಾ ಕರೆಸಿಕೊಳ್ಳುವ ಈ ಸಾಧನದ ಬಣ್ಣ ನಿಜಕ್ಕೂ ಕಿತ್ತಳೆ ರಂಗಿನಲ್ಲಿರುತ್ತೆ ಅನ್ನೋದು ವಿಶೇಷ. ಈ ಬ್ಲ್ಯಾಕ್ ಬಾಕ್ಸ್ ನ್ನು ಫೊರೆನ್ಸಿಕ್ ತಂಡ ಪ್ರಯೋಗಾಲಯದಲ್ಲಿ ತನಿಖೆಗೊಳಪಡಿಸಿ ಅದರೊಳಗಿರುವ ಅಂಶಗಳನ್ನು ರಿಟ್ರೀವ್ ಮಾಡುತ್ತಾರೆ. 1.25 ಲಕ್ಷ ಲೀಟರ್ ಪೆಟ್ರೋಲ್ ತುಂಬಿದ್ದ ವಿಮಾನ ಸ್ಪೋಟವಾದರೂ ಈ ಬ್ಲ್ಯಾಕ್ ಬಾಕ್ಸ್ ಗೆ ನಯಾ ಪೈಸೆ ಹಾನಿಯಾಗುವುದಿಲ್ಲ. ಅಸಲಿಗೆ ಈ ಬ್ಲ್ಯಾಕ್ ಬಾಕ್ಸ್ ಮೇಲಿನ ಕವಚ ಉಕ್ಕಿನಿಂದ ಸಿದ್ಧವಾಗಿದ್ದರೆ ಇದರೊಳಗೆ ಭದ್ರವಾಗಿರುತ್ತೆ ಡಾಟಾ ರೆಕಾರ್ಡರ್. ಹೀಗಾಗಿಯೇ ಎಂಥದ್ದೇ ದೊಡ್ಡ ಮಟ್ಟದ ಬೆಂಕಿ, ಭಾರ ಬಿದ್ದರೂ ಈ ಬ್ಲ್ಯಾಕ್ ಬಾಕ್ಸ್ ಗೆ ಹಾನಿಯಾಗುವುದಿಲ್ಲ.
ಜಗತ್ತಿನ ಅತಿ ದುಬಾರಿ ವಿಮೆಗೆ ಸಿದ್ಧವಾಯ್ತಾ ಅಖಾಡ
ವಿಮಾನದ ಬಾಗಿಲು ತುಂಡಾಗಿದ್ದಕ್ಕೆ ಓರ್ವ ಬಚಾವ್
ಅಹಮದಾಬಾದ್ ನ ಘನಘೋರ ದುರಂತ ಇದೀಗ ಮತ್ತೊಂದು ಇತಿಹಾಸಕ್ಕೆ ಸಾಕ್ಷಿಯಾಗುತ್ತಿದೆ. ಜಗತ್ತಿನ ಅತಿ ದುಬಾರಿ ವಿಮೆಯನ್ನೀಗ ಭರಿಸಬೇಕಾದ ಅನಿವಾರ್ಯತೆಯಲ್ಲಿ ವಿಮಾ ಕಂಪನಿಗಳು ಸಿಲುಕಿವೆ. ಬೋಯಿಂಗ್ ಕಂಪನಿಯ ಡ್ರೀಮ್ ಲೈನರ್ ವಿಮಾನಕ್ಕೆ 2,410 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಆದರೆ ವಿಮಾನ ಹಳೆಯದಾಗುತ್ತಿದ್ದಂತೆ ಅದರ ಮೌಲ್ಯವೂ ಕುಸಿಯುತ್ತೆ. ಹೀಗಾಗಿ ಇಂದಿನ ವಿಮಾ ಮೌಲ್ಯ ಅಂದಾಜಿನ ಪ್ರಕಾರ, 500ರಿಂದ ಒಂದು ಸಾವಿರ ಕೋಟಿ ಆಗಬಹುದು. ಉಳಿದಂತೆ ವಿಮಾನದಲ್ಲಿದ್ದ 241 ಪ್ರಯಾಣಿಕರಿಗೆ ತಲಾ 1.4 ಕೋಟಿಯ ಪರಿಹಾರ ನೀಡಬೇಕಿದೆ. ಇದಕ್ಕೇ ಅಂದಾಜು 350 ಕೋಟಿ ರೂ. ಮೀರಿ ಹಣ ಬೇಕಾಗಬಹುದು. ಇನ್ನು 61 ವಿದೇಶಿ ಪ್ರವಾಸಿಗರಿದ್ದಾರೆ. ಇವರ ವಿಮೆಯ ಮೊತ್ತದಲ್ಲಿ ಏರುಪೇರಾಗಬಹುದು. ಹೀಗಾಗಿ ಡ್ರೀಮ್ ಲೈನರ್ ದುರಂತದ ವಿಮಾ ಪರಿಹಾರವೇ 2 ಸಾವಿರ ಕೋಟಿಯಷ್ಟಾಗಬಹುದು ಎನ್ನಲಾಗ್ತಿದೆ. ಇನ್ನು ಅತಿ ಭಯಾನಕ ದುರಂತದಲ್ಲೂ ಓರ್ವ ಪವಾಡ ಸದೃಷ ರೀತಿಯಲ್ಲಿ ಪಾರಾಗಲು 11ಎ ಸೀಟೇ ಕಾರಣ ಎನ್ನಲಾಗುತ್ತಿದೆ.
ಆದರೆ, ಹಾಸ್ಟೆಲ್ ಗೆ ವಿಮಾನ ಅಪ್ಪಳಿಸ್ತಿದ್ದಂತೆ ವಿಮಾನ ತುಂಡಾಗಿದೆ. ಆಗ ವಿಶ್ವಾಸ್ ರಮೇಶ್ ಕೂತಿದ್ದ ತುರ್ತು ನಿರ್ಗಮನ ದ್ವಾರ ತುಂಡಾಗಿದೆ. ಇದರ ಸಮೇತ ವಿಶ್ವಾಸ್ ಹೊರಬಿದ್ದಿದ್ದಾರೆ. ಹೀಗಾಗಿ ಅವರು ಸಾವಿನ ಮನೆಯ ಕದತಟ್ಟಿ ವಾಪಾಸ್ ಆಗಿದ್ದಾರೆ. ಒಟ್ನಲ್ಲಿ ಭಾರತದ ವಿಮಾನಯಾನ ಕ್ಷೇತ್ರದ ಅತ್ಯಂತ ಕರಾಳ ಅಧ್ಯಾಯದ ಹಿಂದಿನ ಸತ್ಯ ಇನ್ನಷ್ಟೇ ಬಯಲಾಗಬೇಕಿದೆ.