ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಂಕ್ಷಿಪ್ತ ಮಾಹಿತಿ ನೀಡಿಲ್ಲ. ಸಂಪೂರ್ಣ ತನಿಖೆ ಬಳಿಕ ಮಾಹಿತಿ ನೀಡುತ್ತಾರೆ. ತನಿಖೆ ಸಾಗುತ್ತಿದೆ. ತನಿಖೆ ಸಂಪೂರ್ಣವಾದಾಗ ವರದಿ ಒಪ್ಪಿಸುತ್ತಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ವರದಿಗಾರರಿಗೆ ಸ್ಪಂದಿಸಿದ ಪರಮೇಶ್ವರ್, ರಾಹುಲ್ ಗಾಂಧಿ ಪ್ರತಿಭಟನೆಗೆ ಭದ್ರತೆ ವಿಚಾರ ಮತ್ತು ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಸರ್ಕಾರಕ್ಕೆ ಎಲ್ಲವನ್ನು ಹ್ಯಾಂಡಲ್ ಮಾಡುವ ಸಾಮರ್ಥ್ಯವಿದೆ. ಭದ್ರತೆಗೆ ಸಾಕಷ್ಟು ಪೊಲೀಸರನ್ನು ನೀಯೋಜನೆ ಮಾಡಿದ್ದಾರೆ. ಎಲ್ಲಾ ರೀತಿಯ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಒಳಮೀಸಲಾತಿ ವರದಿ ಸ್ವೀಕಾರದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಯಾರು ಒಳಮೀಸಲಾತಿ 20 ದಿನಗಳಲ್ಲಿ ಜಾರಿ ಮಾಡುತ್ತೇನೆ ಎಂದಿದ್ದರೋ ಗೊತ್ತಿಲ್ಲ. ಇಂದು ವರದಿ ಸಿಎಂಗೆ ಕೊಡುತ್ತಾರೆ. ಬಳಿಕ ವರದಿಯಲ್ಲಿನ ಅಂಶದ ಪ್ರಕಾರ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ಒಳಮೀಸಲಾತಿ ಆಗಬೇಕೆನ್ನುವ ಉದ್ದೇಶದಿಂದ ಮಾಡಿದ್ದೆವು, ಅದನ್ನು ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮಾದಕ ವಸ್ತುಗಳ ವಿರೋದಿ ಕಾರ್ಯಪಡೆ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾದ್ಯಮಗಳ ವರದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಾರ್ಯಪಡೆ ಟಾಸ್ಕ್ ಪೋರ್ಸ್ ಇದ್ದಂತೆ. ಎಲ್ಲೆಲ್ಲಿ ಮಾಹಿತಿ ಬರುತ್ತದೆ, ಅದರ ಆಧಾರದ ಮೇಲೆ ಕೆಲಸ ಮಾಡುತ್ತಾರೆ. ಬೆಂಗಳೂರು ಸಿಟಿ ಹಾಗೂ ರಾಜ್ಯದಲ್ಲಿ ಮಾಧಕ ದೃವ್ಯ ನಿರ್ಮೂಲನೆ ಮಾಡುವುದಕ್ಕಾಗಿ ಕೆಲಸ ಮಾಡುತ್ತಾರೆ. ಈಗಾಗಲೇ ಪ್ರತಿ ಎಸ್ಪಿಗೂ ನಿರ್ದಿಷ್ಟ ಆದೇಶ ಕೊಟ್ಟಿದ್ದೇವೆ. ಅದರ ಜೊತೆ ಇದು ಸಹ ಇನ್ನಷ್ಟು ಬಲಿಷ್ಠವಾಗಲಿ. ANF ಇಂದ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ.
ನಕ್ಸಲ್ ನಿರ್ಮೂಲನೆಯಾಗಿದೆ ಎಂದು ನಾವು ಡಿಕ್ಲೇರ್ ಮಾಡಿದ್ದೇವೆ. ಆ ಸಂಧರ್ಭದಲ್ಲಿ ANF ವಿಸರ್ಜನೆ ಮಾಡಬೇಕೆಂದು ಚರ್ಚೆ ಇತ್ತು. ಆದರೆ ಅದನ್ನು ಹಾಗೆ ಇಟ್ಟು ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡಿದ್ದೇವೆ. SAF ಪೋರ್ಸ್ಗೆ ANF ನಿಂದ 200-250 ಕೆಲವರನ್ನು ತೆಗೆದುಕೊಳ್ಳಲಾಗಿತ್ತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ತೆಗೆದುಕೊಂಡಿದ್ದೇವು. ಈಗ ಬೆಂಗಳೂರಿಗೂ ಸ್ಟಾಪ್ ಕಡಿಮೆ ಇತ್ತೆಂದು ANFನಿಂದ ಕೆಲವರನ್ನು ತೆಗೆದುಕೊಂಡಿದ್ದೇವೆ. ಅವಶ್ಯಕತೆ ಇದ್ದಲ್ಲಿ ಮತ್ತೆ ನಿಯೋಜನೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.