ವಸತಿ ಸಚಿವರು ರಾಜೀನಾಮೆ ನೀಡಲಿ ಎಂದು ಸಾಗರದ ಕಾಂಗ್ರೆಸ್ ಶಾಸಕ ಬೇಲೂರು ಗೋಪಾಲಕೃಷ್ಣ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸತಿ ಯೋಜನೆ ಬಗ್ಗೆ ನೀವು ಈಗಾಗಲೇ ಆರೋಪ ಕೇಳಿದ್ದೀರಿ. ಹಿರಿಯ ಸದಸ್ಯರು ಇದರ ಬಗ್ಗೆ ಧ್ವನಿ ಎತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಸಚಿವರು ತನಿಖೆಗೆ ಒಳಪಡಬೇಕು.
ಅಲ್ಲಿಯವರೆಗೂ ನೀವು ರಾಜೀನಾಮೆ ನೀಡುವುದು ಒಳಿತು. ತನಿಖೆ ಮುಗಿದ ನಂತರ ಬೇಕಾದರೆ ಮತ್ತೆ ನೀವು ಮಂತ್ರಿ ಆಗಿ. ಈ ಹಿಂದೆ ಬೇರೆ ಬೇರೆ ಹಗರಣಗಳಲ್ಲಿ ಕೆಲವು ನಾಯಕರು ರಾಜೀನಾಮೆ ಕೊಟ್ಟಿದ್ದಾರೆ. ಈ ವಿಚಾರದಲ್ಲಿ ನೀವು ತಪ್ಪಿತಸ್ಥರು ಅಲ್ಲ ಎಂದ ತಕ್ಷಣ ಮತ್ತೆ ಅಧಿಕಾರ ಸ್ವೀಕರಿಸುವ ಅವಕಾಶ ಇದೆ ಆದ್ದರಿಂದ ರಾಜೀನಾಮೆ ನೀಡಿ ಎಂದು ಒತ್ತಾಯಿಸಿದರು.