ಬೆಂಗಳೂರು: ಆರ್ ಸಿಬಿ ಸಂಭ್ರಮಾಚರಣೆ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಕಾಲ್ತುಳಿತ ಉಂಟಾಗಿ 11 ಜನ ಕ್ರೀಡಾ ಪ್ರೇಮಿಗಳು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಆದರೆ, ಜೂನ್ 3ರಂದೇ ಅಪಾಯದ ಎಚ್ಚರಿಕೆಯನ್ನು ವಿಧಾನಸೌಧ ಭದ್ರತಾ ವಿಭಾಗ ಡಿಸಿಪಿ ನೀಡಿದ್ದರು ಎನ್ನಲಾಗಿದೆ.
ಈ ಕುರಿತು ಡಿಪಿಆರ್ ಎ ಕಾರ್ಯದರ್ಶಿಗೆ ಡಿಸಿಪಿ ಕರಿಬಸವನಗೌಡ ಜೂ. 3ರಂದೇ ಪತ್ರ ಬರೆದಿದ್ದರು ಎನ್ನಲಾಗಿದೆ. ವಿಧಾನಸೌಧದಲ್ಲಿ ಆರ್ ಸಿಬಿ ಆಟಗಾರರಿಗೆ ಸನ್ಮಾನ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಭದ್ರತಾ ವಿಚಾರವಾಗಿ ಅಭಿಪ್ರಾಯ ನೀಡುವಂತೆ ಭದ್ರತಾ ವಿಭಾಗದ ಡಿಸಿಪಿಗೆ ಅಧೀನ ಕಾರ್ಯದರ್ಶಿ ಪತ್ರ ಬರೆದಿದ್ದರು. ಈ ಪತ್ರಕ್ಕೆ ಉತ್ತರವಾಗಿ ಡಿಸಿಪಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ಕಾರಣ ಭದ್ರತೆಗೆ ಸಿಬ್ಬಂದಿ ಕೊರತೆಯಾಗುತ್ತದೆ. ಭದ್ರತಾ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಭದ್ರತೆಗೆ ತೊಂದರೆಯಾಗಬಹುದು ಎಂದು ಉಲ್ಲೇಖಿಸಿದ್ದರು ಎನ್ನಲಾಗಿದೆ.
ಹೊರಗಡೆಯಿಂದ ಸಿಬ್ಬಂದಿ ಹಾಗೂ ಅಧಿಕಾರಿಗಳ ನಿಯೋಜನೆ ಮಾಡಿಕೊಳ್ಳಬೇಕು. ಹೀಗಾಗಿ ಕಾಲಾವಕಾಶ ಬೇಕು ಅಂತ ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದರು. ಕಾನೂನು ಸುವ್ಯವಸ್ಥೆ ಹಾಗೂ ಸಂಚಾರಿ ಪೊಲೀಸರ ಜೊತೆ ಕೊರ್ಡಿನೇಟ್ ಮಾಡಬೇಕು. ಈ ಎಲ್ಲಾ ಕೆಲಸ ಮಾಡಲು ಸಮಯಾಕಾಶವದ ಕೊರತೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಎಚ್ಚರಿಸಿದರೂ ಡಿಪಿಆರ್.ಎ ಕಾರ್ಯದರ್ಶಿ ಸತ್ಯವತಿ ನಿರ್ಲಕ್ಷ್ಯ ವಹಿಸಿರುವುದು ಈಗ ಬಯಲಿಗೆ ಬಂದಿದೆ. ಸಿಬ್ಬಂದಿ ಕೊರತೆ ಇದೆ. ಸಮಾಯವಕಾಶ ಬೇಕು ಅಂತ ತಿಳಿಸಿದರೂ ಕಾರ್ಯಕ್ರಮಕ್ಕೆ ಗ್ರಿನ್ ಸಿಗ್ನಲ್ ನೀಡಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ, ಸತ್ಯವತಿ ಅವರು ಜೂನ್ 4ರಂದು ಸ್ಟೇಡಿಯಂಗೆ ಹೋಗಿ ಅಂತಲೂ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು.
ಪತ್ರದಲ್ಲಿ ಏನಿದೆ?
- ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡಕ್ಕೆ Fan Following ದೇಶ್ಯಾದ್ಯಂತ ಇದೆ
- ಆತರುದಲ್ಲಿ ಕಾರ್ಯಕ್ರಮ ಆಯೋಜಿಸುವುದರಿಂದ ಲಕ್ಷಾಂತರ ಅಭಿಮಾನಿಗಳು ಆಗಮಿಸ್ತಾರೆ
- ವಿಧಾನಸೌಧ ಭದ್ರತಾ ವಿಭಾಗದಲ್ಲಿ ಅಧಿಕಾರಿ/ಸಿಬ್ಬಂದಿಗಳ ಕೊರತೆ ಇರುವುದರಿಂದ ಬಂದೋಬಸ್ತ್ ತೊಂದರೆ ಸಾಧ್ಯತೆ ಇದೆ.
- ಪಾಸ್ ಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಕೋರಿದೆ.
- ವಿಧಾನಸೌಧದ ಸಚಿವಾಲಯ ಅಧಿಕಾರಿಗಳು, ಸಿಬ್ಬಂದಿ ತಮ್ಮ ಕುಟುಂಬದವರನ್ನು ಕರೆತರುವ ಸಾಧ್ಯತೆಯಿದೆ.
- ಕುಟುಂಬ ವರ್ಗದವರನ್ನು ಕರೆತರದಂತೆ ಮಧ್ಯಹ್ನಾದ ನಂತರ ರಜೆ ನೀಡಲು ಆದೇಶ ನೀಡಲು ಉಲ್ಲೇಖ
- ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಅಳವಡಿಸುವುದು ಅವಶ್ಯಕ.
- ವಿಧಾನಸೌಧ ಕಟ್ಟಡವು ವೈಟಲ್ ಇನ್ಸ್ಟಾಲೇಶನ್ ಕಟ್ಟಡವಾಗಿದ್ದು ಸಿಸಿಟಿ ಅವಶ್ಯಕತೆ ಹೆಚ್ಚಾಗಿರುತ್ತದೆ
- ವೇದಿಕೆಯ ಮೇಲೆ ಆಟಗಾರರು ಹಾಗೂ ಮುಖ್ಯಮಂತ್ರಿ ಕುಳಿತುಕೊಳ್ಳುವ ವ್ಯವಸ್ಥೆ ಇದೆ – ಲೋಕೋಪಯೋಗಿ ಇಲಾಖೆಯಿಂದ ಮುಂಚಿತವಾಗಿಯೇ ವೇದಿಕೆ ಪರೀಕ್ಷಿಸಬೇಕು
- ಕನಿಷ್ಠ ಎರಡು ಗಂಟೆ ಆಯೋಜಕರಿಗೆ ಬಿಟ್ಟುಕೊಡಲು ತಿಳಿಸಬೇಕು.
- ವಿದ್ಯುತ್ ಉಪಕರಣಗಳು ಉಪಯೋಗಿಸುತ್ತಿದ್ದು, ಸಂಬಂಧಪಟ್ಟ ವಿದ್ಯುತ್ ವಿಭಾಗ ಫಿಟ್ನೆಸ್ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು. ಮುಖ್ಯಮಂತ್ರಿ ಹಾಗೂ ರಾಜಕಾರಣಿಗಳು ಬರುವ ವೇದಿಕೆಯಾಗಿದ್ದರಿಂದ ಫಿಟ್ನೆಸ್ ಸರ್ಟಿಫಿಕೇಟ್ ಅವಶ್ಯಕ.
- ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಸಂಸ್ಥೆಯವರು ಕಾರ್ಯಕ್ರಮ ಜರಗುವ 2 ಗಂಟೆ ಮೊದಲು ವೇದಿಕೆಯನ್ನು ಆಂಟಿ ಸಬೌಟೇಜ್ ಚೆಕ್ ಸಂಬಂಧ ಬಿಟ್ಟುಕೊಡುವಂತೆ ಆಯೋಜಕರಿಗೆ ಸೂಚಿಸಬೇಕು.
- ಬಂದೋಬಸ್ತ್ ತೆಗೆದುಕೊಳ್ಳಬೇಕು. ಇದಕ್ಕೆ ಸಮಯಾವಕಾಶ ಬೇಕಾಗಿದೆ.
- ಈ ರೀತಿ ಬೃಹತ್ ಕಾರ್ಯಕ್ರಮಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿಗಳು ಹಾಗೂ ಸಂಚಾರ ಅಧಿಕಾರಿಗಳ ಜೊತೆ ಕೊರ್ಡಿನೇಟ್ ಮಾಡಿಕೊಳ್ಳಲು ಸಮಯ ಅವಕಾಶ ಬೇಕಾಗಿದೆ.
ಇಷ್ಟೊಂದು ಸುದೀರ್ಘ ಉತ್ತರ ನೀಡಿದ್ದರೂ ಕಾರ್ಯದರ್ಶಿ ನಿರ್ಲಕ್ಷ್ಯ ವಹಿಸಿದ್ದು, ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.