ಬಂಡಿದೇವರ ಉತ್ಸವಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ. ವಿಧಾನಸೌಧದ ಮುಂಭಾಗದಲ್ಲಿರುವ ಕೆಂಪೇಗೌಡ ಪ್ರತಿಮೆ ಪೂಜಿಸಿ ಚಾಲನೆ ನೀಡಿದ್ದಾರೆ.
ಬೆಂಗಳೂರು ಬಂಡಿದೇವರ ಉತ್ಸವ ಸಮಿತಿ ಈ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ನಿರ್ಮಲಾನಂದ ಸ್ವಾಮೀಜಿ,ಒಕ್ಕಲಿಗ ಸಮಾಜದವರು ಭಾಗವಹಿಸಿದ್ದರು. ಈ ವೇಳೆ ಬಂಡಿಗಳಲ್ಲಿ ತಂದಿರುವ ದೇವರುಗಳ ಮೆರವಣಿಗೆಗೆ ಚಾಲನೆ ನೀಡಿದ್ದಾರೆ. ಬಿಬಿಎಂಪಿಯಿಂದ ವಿಧಾನಸೌಧದ ಮುಂಭಾಗಕ್ಕೆ ಬಂಡಿಗಳನ್ನು ತರಲಾಗಿತ್ತು.