1993…..ಭಾರತ ಇತಿಹಾಸ ಕಂಡ ಅತ್ಯಂತ ಕರಾಳ ಅಧ್ಯಾಯದ ವರ್ಷವದು. ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಕಂಡುಕೇಳರಿಯದ ದೊಡ್ಡ ದುರಂತವೊಂದು ಘಟಿಸಿತ್ತು. ಷೇರುಪೇಟೆ ಸೇರಿದಂತೆ ಹಲವೆಡೆ ಬಾಂಬ್ ಇಟ್ಟು ವಿಧ್ವಂಸಕ ಕೃತ್ಯ ಎಸಗಲಾಗಿತ್ತು. ನೂರಾರು ಅಮಾಯಕರು ಅಂದು ಈ ಸರಣಿ ಬಾಂಬ್ ಸ್ಫೋಟದಲ್ಲಿ ಪ್ರಾಣತೆತ್ತಿದ್ದರು. ಅಂದು ಈ ಪರಮಪಾಪದ ಕೃತ್ಯದ ಹಿಂದಿದ್ದದ್ದು ಬೇರಾರೂ ಅಲ್ಲ.
ಅದು ಓನ್ ಅಂಡ್ ಓನ್ಸಿ ದಾವೂದ್ ಇಬ್ರಾಹಿಂ ಕಸ್ಕರ್. ಅವತ್ತು ಸರಣಿ ಬಾಂಬ್ ಸ್ಫೋಟದ ಸಂಚು ರೂಪಿಸಿ ಮುಂಬೈನಿಂದ ಕಾಲ್ಪಿತ್ತಿದ್ದ ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇವತ್ತಿನವರೆಗೂ ಕಣ್ತಪ್ಪಿಸಿಕೊಂಡೇ ಓಡಾಡುತ್ತಿದ್ದಾನೆ. ದಶಕಗಳಿಂದ ಭಾರತದ ಗುಪ್ತಚರ ಸಂಸ್ಥೆಗಳು ಈ ರಕ್ಕಸನ ಹಿಂದೆ ಬಿದ್ದಿವೆ. ಆದರೆ, ಬಂಧನ ಮಾತ್ರ ಅಸಾಧ್ಯವಾಗಿದೆ. ಬಟ್ ಇದೀಗ ದಾವೂದ್ ತಾನಡಗಿದ್ದ ಪಾಕಿಸ್ತಾನದಿಂದ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ.
ಬಂಟರೊಟ್ಟಿಗೆ ಪಾಕ್ ನಿಂದ ಪರಾರಿಯಾದ್ನಾ ದಾವೂದ್
ಹಾಗೆ ನೋಡಿದರೆ ದಾವೂದ್ ದಶಕಗಳಿಂದ ಪಾಕಿಸ್ತಾನದಲ್ಲೇ ಆಶ್ರಯ ಪಡೆದಿದ್ದಾನೆ ಎನ್ನುವುದಕ್ಕೆ ಹತ್ತಾರು ಪುರಾವೆಗಳು ಭಾರತದ ಬಳಿ ಇದ್ವು. ಆದರೆ, ಪಾಕ್ ನೊಳಗೆ ನುಗ್ಗಿ ಆತನನ್ನು ಬಂಧಿಸಿ ತರುವ ಯತ್ನ ಮಾತ್ರ ನಡೆದಿರಲಿಲ್ಲ. ಆದರೀಗ ಬದಲಾದ ಭಾರತದ ವರಸೆ ಪಾಕಿಸ್ತಾನವನ್ನು ಇತಿಹಾಸದ ಪುಟ ಸೇರಿಸುತ್ತಿದೆ. ಇಂಥಾ ಹೊತ್ತಿನಲ್ಲೇ ದಾವೂದ್ ಬಂಧನವಾಗುತ್ತಾ ಎನ್ನುವ ಮಾತುಗಳು ಶುರುವಾಗಿವೆ.
ಅಸಲಿಗೆ ಐಎಸ್ಐ ಶ್ರೀರಕ್ಷೆಯಲ್ಲಿ ದಾವೂದ್ ಕರಾಚಿಯಲ್ಲೇ ಇಷ್ಟು ದಿನ ಅಡಗಿದ್ದ ಎನ್ನಲಾಗುತ್ತಿದೆ. ಆದರೆ, ಯಾವಾಗ ಭಾರತದ ಕ್ಷಿಪಣಿಗಳು ಕರಾಚಿ ನೆತ್ತಿ ಮೇಲೆ ಸಿಡಿಯಲು ಆರಂಭಿಸಿದ್ವೋ ದಾವೂದ್ ತನ್ನ ಸಹಚರರೊಟ್ಟಿಗೆ ಬೇರೆ ಬಿಲ ಸೇರಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಶಕೀಲ್-ಜಿಂಗ್ರಾ ಜೊತೆ ಎಸ್ಕೇಪ್ ಆದ್ನ ದಾವೂದ್…?
ಯಾರೊಬ್ಬರೂ ಕನಸಿನಲ್ಲೂ ಊಹಿಸದಂತಾ ಕಾರ್ಯಚರಣೆಯನ್ನೀಗ ಭಾರತ ಆರಂಭಿಸಿದೆ. ಆಪರೇಷನ್ ಸಿಂಧೂರ್ ಹೆಸರಲ್ಲಿನಲ್ಲಿ ಭಾರತ ಸಾರಿರುವ ಸಂಗ್ರಾಮ ಪಾಕಿಸ್ತಾನವನ್ನು ಮತ್ತೆಂದೂ ಭಾರತದತ್ತ ಕಣ್ಣೆತ್ತಿ ನೋಡದಂತೆ ಮಾಡುತ್ತಿದೆ.
ಇದರ ಬೆನ್ನಲ್ಲೇ ಮುಂದಿನ ಟಾರ್ಗೆಟ್ ದಾವೂದ್ ಇಬ್ರಾಹಿಂ ಅನ್ನೋ ವಾದವೂ ಇದೆ. ಭಾರತದರಲ್ಲಿ ನೆತ್ತರೋಕುಳಿ ಆಡಿದ ದಾವೂದ್ ಸಂಹಾರವೇ ಭಾರತದ ನೆಕ್ಸ್ಟ್ ಟಾರ್ಗೆಟ್ ಎನ್ನಲಾಗ್ತಿದೆ. ಪಾಕಿಸ್ತಾನ ಸೇನೆ, ಕರಾಚಿ ಖಾಕಿ, ಐಎಸ್ಐ ಏಜೆಂಟ್ಸ್ ಮತ್ತು ಸ್ವಂತ ಭದ್ರತೆಗಳ ನಡುವೆ ಜೀವಿಸಿದ್ದ ದಾವೂದ್ ಈಗ ಪತರಗುಟ್ಟಿ ಹೋಗಿದ್ದಾನೆ. ಕರಾಚಿ ಅಂಗಳಕ್ಕೆ ಭಾರತದ ಕ್ಷಿಪಣಿ ಬರ್ತಿದ್ದಂತೆ ತನ್ನ ಸಹಚರರಾದ ಚೋಟಾ ಶಕೀಲ್ ಮತ್ತು ಮುನ್ನಾ ಜಿಂಗ್ರಾನನ್ನು ಕಟ್ಟಿಕೊಂದು ದಾವೂದ್ ದೇಶ ಬಿಟ್ಟಿದ್ದಾನೆ ಎನ್ನಲಾಗ್ತಿದೆ.
ಆದ್ರೆ ಇನ್ನೊಂದು ಮೂಲದ ಪ್ರಕಾರ ದಾವೂದ್ ಗೆ ಪರ್ಯಾಯ ಠಿಕಾಣಿಯನ್ನು ಪಾಕ್ ಕಲ್ಪಿಸಿ ಕೊಟ್ಟಿದೆ ಅನ್ನೋ ವಾದವೂ ಇದೆ. ಏನೇ ಇರ್ಲಿ, ಕರಾಚಿಯಲ್ಲೇ ಇರ್ಲಿ ಇಲ್ಲಾ ಓಡಿ ಹೋಗ್ಲಿ ಗುಪ್ತಚರರ ಕಣ್ಗಾವಲಿನಲ್ಲಿರೋ ದಾವೂದ್ ನ ಅಂತ್ಯವೂ ಸಮೀಪಿಸುತ್ತಿದೆ. ಪಾಕ್ ಚರಣ ಅಂತ್ಯವಾಗ್ತಿದ್ದಂತೆ ಪಾಪಿ ದಾವೂದ್ ಇಬ್ರಾಹಿಂ ಶವಪೆಟ್ಟಿಗೆಗೂ ಅಂತಿಮ ಮೊಳೆ ಹೊಡೆಯಲು ಭಾರತ ಸಜ್ಜಾಗಿದೆ.