ದಾವಣಗೆರೆ : ಅಳಿಯನೊಂದಿಗೆ 55ರ ಆಂಟಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಳಿ ಪ್ರತ್ಯಕ್ಷವಾಗಿರುವ ಅತ್ತೆ ಮಗಳ ಮೇಲೆ ಹಲ್ಲೆ ನಡೆಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.
ಗ್ರಾಮಕ್ಕೆ ಬಂದ ಅತ್ತೆ ಶಾಂತಾ, ಪುತ್ರಿ ಹೇಮಾ ಮೇಲೆ ಹಲ್ಲೆ ನಡೆಸಿದ್ದಾಳೆಂಬ ಆರೋಪ ಕೇಳಿ ಬಂದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸಾಲ ಮಾಡಿರುವೆ ಹೀಗಾಗಿ ಮನೆ ಮಾರಾಟ ಮಾಡುತ್ತೇನೆ ಎಂದು ಶಾಂತಾ ಗಲಾಟೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಈ ವೇಳೆ ಶಾಂತಾ ಮತ್ತು ಹೇಮಾ ನಡುವೆ ಜಗಳ ನಡೆದಿದೆ. ಆಗ ಮಗಳ ಮೇಲೆಯೇ ಶಾಂತಾ ಹಲ್ಲೆ ನಡೆಸಿದ್ದಾಳೆ. ಮೇ. 2 ರಂದು ಶಾಂತಾ, ಅಳಿಯ ಗಣೇಶ್ ಜೊತೆ ಪರಾರಿಯಾಗಿದ್ದಳು ಎನ್ನಲಾಗಿದೆ. ಸದ್ಯ ಒಂಟಿಯಾಗಿ ಮನೆಗೆ ಬಂದು ಪುತ್ರಿ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾಳೆ. ಸದ್ಯ ಗಾಯಗೊಂಡಿರುವ ಹೇಮಾ ಆಸ್ಪತ್ರೆಗೆ ದಾಖಲಾಗಿದ್ದು, ನ್ಯಾಯಕ್ಕಾಗಿ ಮನವಿ ಮಾಡುತ್ತಿದ್ದಾರೆ.