ದರ್ಶನ್ ವಿದೇಶ ಪ್ರವಾಸ ಭವಿಷ್ಯ ನಾಳೆ ತೀರ್ಮಾನವಾಗಲಿದೆ. ಡೆವಿಲ್ ಸಿನಿಮಾ ಚಿತ್ರೀಕರಣಕ್ಕಾಗಿ ದುಬೈ ಹಾಗೂ ಯುರೋಪ್ ಗೆ ತೆರಳಲು ಅನುಮತಿ ಕೋರಿ ದರ್ಶನ್ ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ರು. ನಿನ್ನೆ ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ ಆದೇಶವನ್ನು ನಾಳೆಗೆ ಕಾಯ್ದಿರಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್, ಸದ್ಯ ಡೆವಿಲ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹಾಡಿನ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಆದ್ರೆ, ಜಾಮೀನಿನ ಮೇಲೆ ಹೊರಗಿರುವ ದರ್ಶನ್ ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ ಅವಶ್ಯವಿದೆ.
ಈ ನಿಟ್ಟಿನಲ್ಲೇ ದರ್ಶನ್ ಕೋರ್ಟ್ ಮೊರೆ ಹೋಗಿದ್ದಾರೆ. ಇನ್ನು ದರ್ಶನ್ ವಿದೇಶಕ್ಕೆ ಹೋದ್ರೆ ವಾಪಾಸ್ ಬರೋದಿಲ್ಲ ಹೀಗಾಗಿ ಫಾರಿನ್ ಟ್ರಿಪ್ ಗೆ ಅನುಮತಿ ನೀಡಬೇಡಿ ಅಂತಾ ಎಸ್ಎಸ್ ಪಿ ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ. ಹೀಗಾಗಿ ನಾಳಿನ ಕೋರ್ಟ್ ಆದೇಶ ಡೆವಿಲ್ ಸಿನಿಮಾದ ಹಾಡಿನೊಟ್ಟಿಗೆ ದರ್ಶನ್ ವಿದೇಶ ಪ್ರವಾಸದ ಭವಿಷ್ಯವನ್ನೂ ತೀರ್ಮಾನಿಸಲಿದೆ.