ಪಹಲ್ಗಾಮ್ ನರಮೇಧ ಪ್ರತೀಕಾರಕ್ಕೆ ಸಮಸ್ತ ಭಾರತೀಯರ ರಕ್ತ ಕುದಿಯುತ್ತಿದೆ. ನಿನ್ನೆಯ ಮೋದಿ ಮನ್ ಕಿ ಬಾತ್ ನಲ್ಲೂ 26 ಜನರ ಹತ್ಯೆಗೆ ನ್ಯಾಯ ಶತಸಿದ್ಧ ಅಂತಾ ಪುನರುಚ್ಛರಿಸಿದ್ದಾರೆ. ಹಾಗಿದ್ದರೆ ಪಾಕಿಸ್ಥಾನ ಸಂಹಾರಕ್ಕೆ ನೀಲನಕ್ಷೆ ಸಿದ್ಧವಾಗಿದೆಯಾ? ಇದಕ್ಕೆ ಸಾಕ್ಷಿ ಎನ್ನುವಂತೆ, ಭಾರತೀಯ ನೌಕಾಪಡೆ ಈಗಾಗಲೇ ರಣೋತ್ಸಾಹದಲ್ಲಿದ್ದು ಕರಾವಳಿ ವ್ಯಾಪ್ತಿಯಲ್ಲಿ ಅತ್ಯಂತ ಮಹತ್ತರ ಕ್ಷಿಪಣಿ ಪರೀಕ್ಷೆ ಮಾಡಿದೆ. ಈ ಮೂಲಕ ಪಾಕ್ ಗೆ ಉಳಿಗಾಲವಿಲ್ಲ ಅನ್ನೋ ಸಂದೇಶವನ್ನೂ ರವಾನಿಸಿದೆ.

ಪಾಕಿಸ್ಥಾನಕ್ಕೆ ಅದ್ಯಾವ ದೇಶದಿಂದ ಸಿಕ್ತು ಅಭಯ
ಒಂದೆಡೆ ಭಾರತ ಯುದ್ಧ ತಾಲೀಮು ಆರಂಭಿಸಿದರೆ ಇತ್ತ ಪಾಕಿಸ್ಥಾನಕ್ಕೆ ಚಳಿ ಜ್ವರ ಬಂದಿದೆ. ಸಂಭಾವ್ಯ ದಾಳಿಯನ್ನು ಹಿಮ್ಮೆಟ್ಟಿಸುವುದು ಹೇಗೆ ಅಂತಾ ಪಾಕ್ ಲೆಕ್ಕ ಹಾಗುತ್ತಿದೆ. ಇದರ ಬೆನ್ನಲ್ಲೇ ಪಾಕ್ ಗೆ ಟರ್ಕಿ ದೇಶದಿಂದ ಸೇನಾ ಬಲ ಸಿಕ್ಕಿದೆ. ಹೌದು, ಈ ಹಿಂದಿನ ಒಪ್ಪಿಂದದಂತೆ ಪಾಕಿಸ್ಥಾನಕ್ಕೆ ಸೇನಾ ಬಲ ನೀಡಲು ಮುಂದಾಗಿರುವ ಟರ್ಕಿ, ತನ್ನ ವಾಯು ಸೇನೆಯು ಸಿ 130 ಹರ್ಕ್ಯುಲಸ್ ವಿಮಾನವನ್ನು ಕರಾಚಿಗೆ ರವಾನಿಸಿದೆ. ಈ ಹಿಂದೆ ಉಭಯ ದೇಶಗಳ ನಡುವೆ ಒಪ್ಪಂದವಾದಂತೆ, ತುರ್ತು ಪರಿಸ್ಥಿತಿಯಲ್ಲಿ ಸೇನಾ ನೆರವು ನೀಡುವ ವಾಗ್ದಾನ ಮಾಡಿದ್ದ ಟರ್ಕಿ ಇದೀಗ ತನ್ನ ಸೇನೆಯನ್ನು ಪಾಕ್ ಪರವಾಗಿ ನಿಲ್ಲಲು ರವಾನಿಸಿದೆ. ಇದರ ಅಂಗವಾಗೇ ಕರಾಚಿ ವಾಯುನೆಲೆಗೆ ಆರು ಸಿ 130 ಯುದ್ಧ ವಿಮಾನಗಳು ಲ್ಯಾಂಡ್ ಆಗಿವೆ.

ಹಣದ ಹರಿವು ಹರಿಸಿದೆಯಾ ಚೀನಾ
ಇನ್ನು ಶತ್ರುವಿನ ಶತ್ರು ಮಿತ್ರ ಅನ್ನೋ ಮಾತನ್ನ ನಂಬಿರೋ ಚೀನಾ, ಒಳಗಿಂದೊಳಗೇ ಮಹಾಮಸಲತ್ತು ನಡೆಸಿದೆ. ಭಾರತ ಯಾವ ಕ್ಷಣದಲ್ಲಾದ್ರೂ ಪಾಕ್ ವಿರುದ್ಧ ತಿರುಗುಬೀಳೋ ಸಾಧ್ಯತೆಗಳಿವೆ. ಆದ್ರೆ ಪಾಕಿಸ್ಥಾನ ಆರ್ಥಿಕವಾಗಿ ಬಿಕಾರಿ ದೇಶವಾಗಿದೆ. ಜಗತ್ತಿನ ಮುಂದೆ ಜೋಳಿಗೆ ಹಿಡಿದು ಭಿಕ್ಷೆ ಬೇಡ್ತಿರೋ ದೇಶ, ಇವತ್ತು ಭಾರತವನ್ನು ಮಟ್ಟ ಹಾಕುತ್ತೇನೆ ಅನ್ನೋ ದುರಂಹಕಾರದ ಮಾತುಗಳನ್ನು ಆಡ್ತಿದೆ. ಇದಕ್ಕೆ ನೆರೆಯ ಚೀನಾ ಕುಮ್ಮಕ್ಕು ನೀಡ್ತಿದೆ. ಅಷ್ಟೇ ಅಲ್ಲಾ ಪಾಕ್ ಗೆ ಭರಪೂರ ಹಣದ ಹರಿವನ್ನೂ ಚೀನಾ ಹರಿಸಿರೋದು ಈಗ ಗುಟ್ಟಾಗಿ ಉಳಿದಿಲ್ಲ.
ಭಾರತ ಪಾಕ್ ನಡುವಿನ ಈಗಾಗಲೇ ಅಘೋಷಿತ ಸಮರ ಆರಂಭವಾಗಿದೆ. ಕಾಶ್ಮೀರ ಕಣಿವೆಯಲ್ಲಿ ಅಡಗಿರೋ ಜಿಹಾದಿ ಕ್ರಿಮಿಗಳನ್ನು ಹೆಕ್ಕಿ ತೆಗೆದು ಸೇನೆ ಬೇಟೆಯಾಡ್ತಿದೆ. ಇತ್ತ ಗಡಿಯಲ್ಲಿ ಪಾಕಿಗಳ ಅಪ್ರಚೋದಿತ ಗುಂಡಿನ ದಾಳಿಗೂ ತಕ್ಕ ಪ್ರತ್ಯುತ್ತರ ನೀಡ್ತಿದೆ. ಇನ್ನೇನು ಪಿಒಕೆಯೊಳಗೆ ನುಗ್ಗಿ ಪಾಕಿಗಳ ಗರ್ವಭಂಗ ಮಾಡುತ್ತಾ, ಇಲ್ಲಾ ನೇರ ಇಸ್ಲಾಮಾಬಾದನ್ನೇ ಗುರಿಯಾಗಿಸಿ ತಕ್ಕ ಪಾಠ ಕಲಿಸುತ್ತಾ ಅನ್ನೋದು ಈಗಿರೋ ಪ್ರಶ್ನೆ. ಇದರ ನಡುವೆ, ಚೀನೀ, ಟರ್ಕಿ ಪಾಕ್ ನಿಲ್ತಿದ್ರೆ, ಇತ್ತ ಇಸ್ರೇಲ್ ಸೇರಿ ಹಲವು ರಾಷ್ಟ್ರಗಳ ಭಾರತಕ್ಕೆ ಬಹಿರಂಗ ಬೆಂಬಲ ಘೋಷಿಸಿದೆ.. ಹೀಗಾಗಿ ಈ ಯುದ್ಧೋತ್ಸಾಹ ಯಾವ ದಿಕ್ಕಿನತ್ತ ಸಾಗುತ್ತೆ ಅನ್ನೋದು ಈಗಿರುವ ಪ್ರಶ್ನೆ.