ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿರುವ ನವವೃಂದಾವನ ಗಡ್ಡೆ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ಮಠಗಳ ಸ್ವಾಮೀಜಿಗಳು ಸಮಾಗಮವಾಗಿದ್ದಾರೆ. ಉತ್ತರಾದಿಮಠದ ಸತ್ಯಾತ್ಮ ತೀರ್ಥರು ಹಾಗೂ ರಾಯರ ಮಠದ ಶ್ರೀ ಸುಭುದೇಂದ್ರರಿಂದ ಮಾತುಕತೆ ನಡೆಸಿದ್ದಾರೆ.
ಯತಿಗಳ ಆರಾಧನೆಯ ಪೂಜೆಗಾಗಿ ಎರಡೂ ಮಠಗಳ ಮಧ್ಯೆ ವಿವಾದ ತಲೆದೋರಿತ್ತು. ಪ್ರತಿವರ್ಷ ಸರ್ವೋಚ್ಛ ನ್ಯಾಯಲಯದ ತೀರ್ಪಿನಂತೆ ಪೂಜೆ ನಡೆಸಲಾಗುತ್ತಿತ್ತು. ಈಗ ಈ ವಿವಾದ ಬಗೆಹರಿಸಿಕೊಳ್ಳುವ ಉದ್ಧೇಶದಿಂದ ಸ್ವಾಮೀಜಿಗಳು ಮಾತುಕತೆ ನಡೆಸುತ್ತಿದ್ದಾರೆ.
ಸ್ವಾಮೀಜಿಗಳು, ಸರ್ವೋಚ್ಛ ನ್ಯಾಯಲಯದಲ್ಲಿ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾತುಕತಟೆ ನಡೆಸಲಾಗುತ್ತಿದೆ. ಈ ಸುದ್ದಿ ಕೇಳಿ ಭಕ್ತರು ಹರ್ಷ ಪ್ಯಕ್ತಪಡಿಸಿದ್ದಾರೆ.